ಪರಿಸರ ಮದುವೆ
ಸಂರಕ್ಷಣೆಯ ಜಾಗೃತಿ ಮೂಡಿಸಲೆಂದೇ ತಮಿಳುನಾಡಿನಲ್ಲಿ ಒಂದು ವಿಶಿಷ್ಟ ಮದುವೆ ನಡೆಯಿತು. ಈ ಮದುವೆಯನ್ನು ಏರ್ಪಡಿಸಿದವರು ಕೊಯಮತ್ತೂರು ಜಿಲ್ಲೆಯ ಶೇಷಮಲೈ ಹಳ್ಳಿಗರು. ವಧುವರರು ಯಾರೆಂದು ಬಲ್ಲಿರೇನು? ಅಶ್ವತ್ಥವೃಕ್ಷ ವರವಾದರೆ, ವಧು ಬೇವಿನಗಿಡ! ಮುನಿಯಪ್ಪ ದೇವಾಲಯದಲ್ಲಿ ನಡೆದ ಈ ಮದುವೆ ವಿಧ್ಯುಕ್ತವಾಗಿತ್ತು.
ವಧೂವರರನ್ನು ಸೀರೆ, ರವಿಕೆ, ಪಂಚೆ, ಉತ್ತರೀಯ ಉಡಿಸಿ ವಿಶೇಷವಾಗಿ ಸಿಂಗರಿಸಲಾಗಿತ್ತು. ಪುರೋಹಿತ ಕೃಷ್ಣಸ್ವಾಮಿಯವರ ನೇತೃತ್ವದಲ್ಲಿ ನಡೆದ ಈ ಮದುವೆಯಲ್ಲಿ ಸುತ್ತಲಿನ ೧೪ ಗ್ರಾಮಗಳ ಜನರು ಸಂಭ್ರಮದಿಂದ ಭಾಗವಹಿಸಿದ್ದರು. ಮದುವೆಯ ಖರ್ಚೆಲ್ಲ ಅವರದ್ದೇ. ಎಲ್ಲರಿಗೂ ಸುಗ್ರಾಸ ಭೋಜನವೂ ಇತ್ತು.
ಸಾಮಾನ್ಯವಾಗಿ ಮದುವೆಮನೆಗೆ ಬಂದ ಹಿರಿಯರ ಆಶೀರ್ವಾದವನ್ನು ಮದುಮಕ್ಕಳು ಪಡೆದರೆ, ಇಲ್ಲಿ ಬಂದವರೆಲ್ಲರೂ ಮಧುಮಕ್ಕಳಿಗೆರೆಗಿ ಆಶೀರ್ವಾದ ಪಡೆದುದು ವಿಶೇಷ (ಅಶ್ವತ್ಥ ಮರ ’ನಾರಾಯಣ’ನಾದರೆ ಬೇವಿನಗಿಡ ’ಲಕ್ಷ್ಮಿ’ ಸ್ವರೂಪ ಎಂಬ ನಂಬಿಕೆ ನಮ್ಮಲ್ಲಿದೆ.)
ಈ ಮದುವೆಯಿಂದ ಗ್ರಾಮದೇವತೆ ಮುನಿಯಪ್ಪ ಸಂತುಷ್ಟನಾಗಿ ಮಳೆಬೆಳೆ ಸಮೃದ್ಧವಾಗುವುದು ಎಂಬುದು ಹಳ್ಳಿಗರ ನಂಬಿಕೆ. ಮರಗಳೆಂದರೆ ’ದೇವರು’ ಎಂಬ ಭಾವ ಮಾತ್ರವಲ್ಲ. ನಾವು ಇವುಗಳನ್ನು ರಕ್ಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ ಎಂಬ ಸಂದೇಶವೂ ಇಲ್ಲಿದೆ.
Labels: Bodhi Tree, Boudhik Story, Environment, Marriage of Trees, Neem Tree, ಅಶ್ವತ್ಥ ಬೇವಿನಗಿಡ, ಪರಿಸರ, ಬೋಧಕಥೆ, ಮದುವೆ,
ವಧೂವರರನ್ನು ಸೀರೆ, ರವಿಕೆ, ಪಂಚೆ, ಉತ್ತರೀಯ ಉಡಿಸಿ ವಿಶೇಷವಾಗಿ ಸಿಂಗರಿಸಲಾಗಿತ್ತು. ಪುರೋಹಿತ ಕೃಷ್ಣಸ್ವಾಮಿಯವರ ನೇತೃತ್ವದಲ್ಲಿ ನಡೆದ ಈ ಮದುವೆಯಲ್ಲಿ ಸುತ್ತಲಿನ ೧೪ ಗ್ರಾಮಗಳ ಜನರು ಸಂಭ್ರಮದಿಂದ ಭಾಗವಹಿಸಿದ್ದರು. ಮದುವೆಯ ಖರ್ಚೆಲ್ಲ ಅವರದ್ದೇ. ಎಲ್ಲರಿಗೂ ಸುಗ್ರಾಸ ಭೋಜನವೂ ಇತ್ತು.
ಸಾಮಾನ್ಯವಾಗಿ ಮದುವೆಮನೆಗೆ ಬಂದ ಹಿರಿಯರ ಆಶೀರ್ವಾದವನ್ನು ಮದುಮಕ್ಕಳು ಪಡೆದರೆ, ಇಲ್ಲಿ ಬಂದವರೆಲ್ಲರೂ ಮಧುಮಕ್ಕಳಿಗೆರೆಗಿ ಆಶೀರ್ವಾದ ಪಡೆದುದು ವಿಶೇಷ (ಅಶ್ವತ್ಥ ಮರ ’ನಾರಾಯಣ’ನಾದರೆ ಬೇವಿನಗಿಡ ’ಲಕ್ಷ್ಮಿ’ ಸ್ವರೂಪ ಎಂಬ ನಂಬಿಕೆ ನಮ್ಮಲ್ಲಿದೆ.)
ಈ ಮದುವೆಯಿಂದ ಗ್ರಾಮದೇವತೆ ಮುನಿಯಪ್ಪ ಸಂತುಷ್ಟನಾಗಿ ಮಳೆಬೆಳೆ ಸಮೃದ್ಧವಾಗುವುದು ಎಂಬುದು ಹಳ್ಳಿಗರ ನಂಬಿಕೆ. ಮರಗಳೆಂದರೆ ’ದೇವರು’ ಎಂಬ ಭಾವ ಮಾತ್ರವಲ್ಲ. ನಾವು ಇವುಗಳನ್ನು ರಕ್ಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ ಎಂಬ ಸಂದೇಶವೂ ಇಲ್ಲಿದೆ.
Labels: Bodhi Tree, Boudhik Story, Environment, Marriage of Trees, Neem Tree, ಅಶ್ವತ್ಥ ಬೇವಿನಗಿಡ, ಪರಿಸರ, ಬೋಧಕಥೆ, ಮದುವೆ,
No comments:
Post a Comment