Thursday, November 22, 2012

೮೧. ಅನುಶಾಸನದ ಪ್ರಭಾವ

ಅನುಶಾಸನದ ಪ್ರಭಾವ

   ಮಂಗಳೂರಿನಲ್ಲಿ ಒಂದು ಮಹಾಸಾಂಘಿಕ್ ಕಾರ್ಯಕ್ರಮ. ಸುಮಾರು ೪೦,೦೦೦ ಗಣವೇಷಧಾರಿ ಸ್ವಯಂಸೇವಕರು. ಸುಮಾರು ೪೦ ಸಾವಿರ ಇತರ ಜನರು. ಮತ್ತೂ ೨೦ ಸಾವಿರ ಮಾತೆಯರು.

    ಕಾರ್ಯಕ್ರಮದ ನಂತರ ’ಉತ್ಥಿಷ್ಠ’ ಆಜ್ಞೆ ಕೊಟ್ಟಾಗ ಎಲ್ಲರೂ ಎದ್ದು ನಿಂತರು. ’ವಿಕಿರ’ ಕೊಟ್ಟಾಗ ಎಲ್ಲರೂ ಬಲಕ್ಕೆ ತಿರುಗಿದರು. ನಂತರ ’ವಾಮವೃತ’ ಆಜ್ಞೆ ಬಂತು; ಎಲ್ಲರೂ ಎಡಕ್ಕೆ ತಿರುಗಿದರು.

    ಕಾರ್ಯಕ್ರಮ ನೋಡಲು ಬಂದ ಎಲ್ಲರಿಗೂ ಒಂದು ಪತ್ರಿಕೆಯನ್ನು ತರಲು ಹೇಳಲಾಗಿತ್ತು, ನೆಲದ ಮೇಲೆ ಹಾಸಿ ಕುಳಿತುಕೊಳ್ಳಲು. ನಂತರ ಸೂಚನೆ ಕೊಡಲಾಯಿತು. ತಮ್ಮ ತಮ್ಮ ಪತ್ರಿಕೆಯನ್ನು ತೆಗೆದುಕೊಂಡು ಹೋಗಲು.

    ಎಲ್ಲರೂ ಹೋದ ನಂತರ ಆ ಮೈದಾನದಲ್ಲಿ ಒಂದು ಪತ್ರಿಕೆಯೂ ಕಾಣಸಿಗಲಿಲ್ಲ. ಸ್ವಯಂಸೇವಕರನ್ನು ನೋಡಿದ ಇತರ ಜನರಿಗೂ ಅದೇ ಅನುಶಾಸನ ಪರಿಣಾಮ ಬೀರಿತ್ತು.
   
Labels: Discipline, Mangalore, Sangha Story, ಅನುಶಾಸನ, ಪತ್ರಿಕೆ, ಮಂಗಳೂರು, ಸಂಘದ ಕಥೆ

No comments:

Post a Comment