ಸಕಾರಾತ್ಮಕ ಚಿಂತನೆ
೨೦೧೨ರಲ್ಲಿ ಹುಬ್ಬಳ್ಳಿಯಲ್ಲಿ ಹಿಂದೂ ಶಕ್ತಿ ಸಂಗಮ ನಡೆಯಿತು. ಅದಾದ ೧೫ ದಿನಗಳ ನಂತರ ಹುಬ್ಬಳ್ಳಿಯಿಂದ ಆ ಕಾರ್ಯಕ್ರಮಕ್ಕೆ ಹೋದವರ ಒಂದು ಬೈಠಕ್ ನಡೆಯಿತು. ವಿಶ್ವ ಹಿಂದೂ ಪರಿಷತ್ತಿನ ಅಲ್ಲಿನ ಪ್ರಾಂತ ಕಾರ್ಯದರ್ಶಿಗಳು ಒಂದು ಅನುಭವವನ್ನು ಹೇಳಿದರು. ರಾಯಚೂರು ಜಿಲ್ಲೆಯಲ್ಲಿ ಕರಡಿಗುಡ್ಡ ಎನ್ನುವ ಒಂದು ಹಳ್ಳಿಯಿದೆ. ಅಲ್ಲಿಯ ೩೨ ಹರಿಜನ ಕುಟುಂಬದವರು ತಾವು ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗುತ್ತೇವೆ ಎಂದು ಹೇಳಿದ್ದರು. ಯಾವುದೋ ಒಂದು ನಿಶ್ಚಿತ ದಿನ ಮತಾಂತರದ ಕಾರ್ಯಕ್ರಮವಿತ್ತು. ಚರ್ಚಿನವರು ಬಹಳ ಉತ್ಸುಕತೆಯಿಂದ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದರು.
ಸುದ್ದಿ ತಿಳಿದ ತಕ್ಷಣ ವಿಶ್ವ ಹಿಂದೂ ಪರಿಷತ್ತಿನವರು ಹೋಗಿ ಮಾತನಾಡಿದರು. ಆದರೆ ಹರಿಜನರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ’ಇಲ್ಲಿನ ದೇವಸ್ಥಾನದವರು ನಮ್ಮನ್ನು ಒಳಗೆ ಬಿಡುವುದಿಲ್ಲ. ಹಾಗಾಗಿ ನಾವೇಕೆ ನಿಮ್ಮ ಧರ್ಮದಲ್ಲಿರಬೇಕು?’ ಎಂದು ಪ್ರಶ್ನಿಸಿದರು. ಆಗ ಪರಿಷತ್ತಿನವರು ದೇವಸ್ಥಾನದ ಸಮಿತಿಯವರ ಬಳಿ ಮಾತನಾಡಿದರು. ಆದರೆ ಸಮಿತಿಯವರು ಹರಿಜನರನ್ನು ದೇವಸ್ಥಾನದಲ್ಲಿ ಬಿಡಲು ಒಪ್ಪಲಿಲ್ಲ. ೩-೪ ಬಾರಿ ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಅವರ ಮನಸನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ.
ಆಷ್ಟರಲ್ಲಿ ಹುಬ್ಬಳ್ಳಿಯ ಶಕ್ತಿ ಸಂಘಮ ಕಾರ್ಯಕ್ರಮ ಪ್ರಾರಂಭವಾಗಿತ್ತು. ಆ ದೇವಸ್ಥಾನದ ಸಮಿತಿಯ ೩ ಮೂರು ಜನರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಶಿಬಿರದಲ್ಲಿ ಇತರ ೨೯,೭೩೯ ಜನರ ಜೊತೆ ೩ ದಿನವಿದ್ದರು. ಕಾರ್ಯಕ್ರಮದ ನಂತರ ಜನವರಿ ೨೯ರಂದು ರಾತ್ರಿ ಮೂರು ಗಂಟೆಗೆ ಊರು ತಲುಪಿದರು. ಮರುದಿನ ಬೆಳಿಗ್ಗೆ ೭ ಗಂಟೆಗೆ ಆ ಹರಿಜನ ಕೇರಿಗೆ ಹೋಗಿ ಅಲ್ಲಿನ ಜನರನ್ನು ಮಾತನಾಡಿಸಿ ಎಲ್ಲರನ್ನು ದೇವಸ್ಥಾನಕ್ಕೆ ಆಹ್ವಾನಿಸಿದರು. ಮತಾಂತರವಾಗದಂತೆ ಮನವೊಲಿಸಿದರು. ಮೊದಲು ಒಪ್ಪಿರದಿದ್ದ ಆ ದೇವಸ್ಥಾನದ ಸಮಿತಿಯವರು ಸಂಘದ ಶಿಬಿರಕ್ಕೆ ಬಂದ ನಂತರ ಬದಲಾಗಿದ್ದರು. ತಮ್ಮೂರಿನವರು ಮತಾಂತರವಾಗಬಾರದು. ದಲಿತರು ನಮ್ಮೊಡನೆಯೇ ಇರಬೇಕು ಎನ್ನುವ ಮನಸ್ಸು ಮಾಡಿದ್ದರು.
Labels: Conversion, Hubballi, Sangha Story, Transformation, ಚಿಂತನೆ, ಬದಲಾವಣೆ, ಮತಾಂತರ, ವಾತಾವರಣ, ಸಂಘದ ಕಥೆ, ಹುಬ್ಬಳ್ಳಿ
ಸುದ್ದಿ ತಿಳಿದ ತಕ್ಷಣ ವಿಶ್ವ ಹಿಂದೂ ಪರಿಷತ್ತಿನವರು ಹೋಗಿ ಮಾತನಾಡಿದರು. ಆದರೆ ಹರಿಜನರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ’ಇಲ್ಲಿನ ದೇವಸ್ಥಾನದವರು ನಮ್ಮನ್ನು ಒಳಗೆ ಬಿಡುವುದಿಲ್ಲ. ಹಾಗಾಗಿ ನಾವೇಕೆ ನಿಮ್ಮ ಧರ್ಮದಲ್ಲಿರಬೇಕು?’ ಎಂದು ಪ್ರಶ್ನಿಸಿದರು. ಆಗ ಪರಿಷತ್ತಿನವರು ದೇವಸ್ಥಾನದ ಸಮಿತಿಯವರ ಬಳಿ ಮಾತನಾಡಿದರು. ಆದರೆ ಸಮಿತಿಯವರು ಹರಿಜನರನ್ನು ದೇವಸ್ಥಾನದಲ್ಲಿ ಬಿಡಲು ಒಪ್ಪಲಿಲ್ಲ. ೩-೪ ಬಾರಿ ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಅವರ ಮನಸನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ.
ಆಷ್ಟರಲ್ಲಿ ಹುಬ್ಬಳ್ಳಿಯ ಶಕ್ತಿ ಸಂಘಮ ಕಾರ್ಯಕ್ರಮ ಪ್ರಾರಂಭವಾಗಿತ್ತು. ಆ ದೇವಸ್ಥಾನದ ಸಮಿತಿಯ ೩ ಮೂರು ಜನರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಶಿಬಿರದಲ್ಲಿ ಇತರ ೨೯,೭೩೯ ಜನರ ಜೊತೆ ೩ ದಿನವಿದ್ದರು. ಕಾರ್ಯಕ್ರಮದ ನಂತರ ಜನವರಿ ೨೯ರಂದು ರಾತ್ರಿ ಮೂರು ಗಂಟೆಗೆ ಊರು ತಲುಪಿದರು. ಮರುದಿನ ಬೆಳಿಗ್ಗೆ ೭ ಗಂಟೆಗೆ ಆ ಹರಿಜನ ಕೇರಿಗೆ ಹೋಗಿ ಅಲ್ಲಿನ ಜನರನ್ನು ಮಾತನಾಡಿಸಿ ಎಲ್ಲರನ್ನು ದೇವಸ್ಥಾನಕ್ಕೆ ಆಹ್ವಾನಿಸಿದರು. ಮತಾಂತರವಾಗದಂತೆ ಮನವೊಲಿಸಿದರು. ಮೊದಲು ಒಪ್ಪಿರದಿದ್ದ ಆ ದೇವಸ್ಥಾನದ ಸಮಿತಿಯವರು ಸಂಘದ ಶಿಬಿರಕ್ಕೆ ಬಂದ ನಂತರ ಬದಲಾಗಿದ್ದರು. ತಮ್ಮೂರಿನವರು ಮತಾಂತರವಾಗಬಾರದು. ದಲಿತರು ನಮ್ಮೊಡನೆಯೇ ಇರಬೇಕು ಎನ್ನುವ ಮನಸ್ಸು ಮಾಡಿದ್ದರು.
Labels: Conversion, Hubballi, Sangha Story, Transformation, ಚಿಂತನೆ, ಬದಲಾವಣೆ, ಮತಾಂತರ, ವಾತಾವರಣ, ಸಂಘದ ಕಥೆ, ಹುಬ್ಬಳ್ಳಿ
No comments:
Post a Comment