Sunday, November 25, 2012

೧೦೫. ಅವಿನಾಭಾವ ಭಾವನೆ

ಅವಿನಾಭಾವ ಭಾವನೆ

   ಸ್ವಯಂಸೇವಕರಲ್ಲಿ ವಿಚಾರದ ಬಗ್ಗೆ ರಾಜಿ ಇಲ್ಲ. ಸಂಘದ ಒಬ್ಬ ಸ್ವಯಂಸೇವಕ ಶಾಖೆಯಲ್ಲೋ, ವರ್ಗದಲ್ಲೋ ಆಟವಾಡುತ್ತಿರುವಾಗ ಬಿದ್ದು ಕಾಲು ಮುರಿಯಿತು. ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಅವನನ್ನು ನೋಡಲು ಅನೇಕರು ಬಂದಿದ್ದರು. ಅವನ ತಾಯಿ ಅವನ ಪಕ್ಕದಲ್ಲೇ ನಿಂತಿದ್ದರು. ಅವರು ಅಳುತ್ತಾ ’ಏನೋ, ನೀನು ಸಂಘಕ್ಕೆ ಹೋಗಿದ್ದರಿಂದ ಹೀಗಾಯಿತು’ ಎಂದು ಸಂಘದ ಬಗ್ಗೆ ಸ್ವಲ್ಪ ಹಗುರವಾಗಿ ಹೇಳಿದರು. ಅದೂ ಮಗನ ಮೇಲಿನ ಪ್ರೀತಿಯಿಂದಾಗಿ. ಆ ೮-೧೦ನೇ ತರಗತಿಯಲ್ಲಿ ಓದುತ್ತಿರುವಂತಹ ವಿದ್ಯಾರ್ಥಿ, ಆ ಸಂದರ್ಭದಲ್ಲೂ ’ನೋಡಮ್ಮ, ನೀನು ನನಗೆ ಬೇಕಾದರೆ ಬೈಯ್ಯಿ. ಆದರೆ ಸಂಘಕ್ಕೆ ಮಾತ್ರ ಬೈಯ್ಯಬೇಡ’ ಎಂದ.

    ಇದು ೮-೧೦ನೇ ತರಗತಿಯ ಒಬ್ಬ ಹುಡುಗನಿಗೆ ಸಂಘದ ಬಗ್ಗೆ ಇರುವಂತಹ ಅವಿನಾಭಾವವಾದ ಭಾವನೆ.

Labels: Injury, Inseparable, Sangha Story, Swayamsevak, ಅವಿನಾಭಾವ ಭಾವನೆ, ಗಾಯ, ಬಾಲಕ, ಸಂಘಕ್ಕೇನೂ ಅನ್ನದಿರು, ಸಂಘದ ಕಥೆ

No comments:

Post a Comment