Monday, November 19, 2012

೫೭. ಮೂರ್ತಿ ಪೂಜೆ

ಮೂರ್ತಿ ಪೂಜೆ

    ರಾಜಸ್ಥಾನದ ರಾಜ ಜಯಸಿಂಹ ದೇವರನ್ನು ನಂಬದ ಒಬ್ಬ ನಾಸ್ತಿಕ. ಭೋಗ ವಿಲಾಸದ ಜೀವನದಲ್ಲೇ ನಂಬಿಕೆಯಿಟ್ಟಿದವನು. ಒಮ್ಮೆ ಸ್ವಾಮಿ ವಿವೇಕಾನಂದರು ಅವನ ಅರಮನೆಗೆ ಅತಿಥಿಯಾಗಿ ಹೋಗುತ್ತಾರೆ. ಮಾತು ಚರ್ಚೆಗೆ ತಿರುಗಿ, ಮೂರ್ತಿ ಪೂಜೆಯ ವಿಷಯಕ್ಕೆ ಬರುತ್ತದೆ. ಇಬ್ಬರೂ ತಮ್ಮ ತಮ್ಮ ವಿಚಾರವನ್ನು ಹೇಳುತ್ತಾ ಸಾಗುತ್ತಾರೆ.

    ಕೊನೆಗೆ ಸ್ವಾಮಿ ವಿವೇಕಾನಂದರು ರಾಜನ ತಂದೆಯ ಭಾವಚಿತ್ರವನ್ನು ತೋರಿಸಿ ಅದಕ್ಕೆ ಉಗುಳಲು ಹೇಳುತ್ತಾರೆ. ಸ್ವಾಮಿ ವಿವೇಕಾನಂದರಿಂದ ಈ ರೀತಿಯಾದ ಮಾತು ಕೇಳಿ ರಾಜ ಆಶ್ಚರ್ಯ ಪಡುತ್ತಾನೆ. ಆಗ ಸ್ವಾಮಿ ವಿವೇಕನಂದರೇ ವಿವರಿಸುತ್ತಾ "ಈ ಭಾವಚಿತ್ರವು ಕಾಗದದ ಮೇಲೆ ಬಿಡಿಸಿರುವಂತಹುದು. ಅದು ನಿಮ್ಮ ತಂದೆಯ ಭಾವಚಿತ್ರ. ನಿಮ್ಮ ತಂದೆ ಸ್ವರ್ಗಸ್ಥರಾದ ನಂತರವೂ ನೀವು ಅವರ ಭಾವಚಿತ್ರವಕ್ಕೆ ಅವರ ಜೀವಿತ ಅವಧಿಯಲ್ಲಿ ಅವರಿಗೆ ಕೊಟ್ಟಷ್ಟೇ ಗೌರವವನ್ನು ಕೊಡುತ್ತಿದ್ದೀರಿ. ಅದನ್ನು ಕಾಗದ ಎಂದು ಭಾವಿಸದೆ ಅದರಲ್ಲಿ ನಿಮ್ಮ ತಂದೆಯವರನ್ನೇ ಕಾಣುತ್ತಿದ್ದೀರಿ. ಅದೇ ರೀತಿ ನಾವು ಕಲ್ಲನ್ನು ಪೂಜಿಸುವುದಿಲ್ಲ; ಬದಲಾಗಿ ಕಲ್ಲಲ್ಲಿರುವ ದೇವರನ್ನು ಪೂಜಿಸುತ್ತೇವೆ" ಎಂದರು. ತನ್ನ ತಪ್ಪಿನ ಅರಿವಾಗಿ ರಾಜ ಬದಲಾಗಿ ತನ್ನ ನಾಸ್ತಿಕತೆಯನ್ನು ಬಿಡುತ್ತಾನೆ.

Labels: Athiest Raja Jayasimha, Boudhik Story, Swami Vivekananda, ನಾಸ್ತಿಕತೆ, ಬೌದ್ಧಿಕ ಕಥೆ, ರಾಜ ಜಯಸಿಂಹ, ಸ್ವಾಮಿ ವಿವೇಕಾನಂದ

No comments:

Post a Comment