ಮಹಾಪ್ರಯಾಣ
ಡಾಕ್ಟರ್ಜಿಯವರ ಮಹಾನಿರ್ವಾಣದ ಸುದ್ದಿ ಎಲ್ಲೆಡೆ ಹರಡಿತು. ತಂತಿ, ದೂರವಾಣಿ ಮೂಲಕ ದೂರದೂರದವರೆಗೆ ಸುದ್ದಿ ಹೋಯಿತು. ತಂಡ ತಂಡವಾಗಿ ಜನ ಬರತೊಡಗಿದರು. ಸೈಕಲ್ಲು, ಕಾರು, ಬಸ್ಸುಗಳಲ್ಲಿ, ಸಿಕ್ಕಿದ ಯಾವುದೇ ವಾಹನದಲ್ಲಿ ಸ್ವಯಂಸೇವಕರ, ಅಭಿಮಾನಿಗಳ ಮಹಾಪೂರವೇ ನಾಗಪುರದತ್ತ ಹರಿಯತೊಡಗಿತು. ನಾಗಪುರ ನಗರ ಸಂಘಚಾಲಕ ಘಟಾಟೆಯವರ ಮನೆಯಲ್ಲಿ ಸ್ವಯಂಸೇವಕರಲ್ಲದೆ ಸಹಸ್ರಾರು ಮಂದಿ ಬಂದು ಕೂಡಿದ್ದರು. ತಮ್ಮ ಪ್ರಾಣ ಪ್ರಿಯ ನಾಯಕನ ಅಂತ್ಯದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದ ಅನೇಕರಿಗೆ ತಡೆದಷ್ಟೂ ಉಮ್ಮಳಿಸಿ ಬರುತ್ತಿದ್ದ ದುಃಖ, ಕಣ್ಣುಗಳಲ್ಲಿ ಧಾರಾಕಾರ ನೀರು. ಇನ್ನೂ ಕೆಲವರದು ಮೂಕರೋದನ ಮಾತ್ರ.
೧೯೪೦ ಜೂನ್ ೨೧ರ ಸಂಜೆ ೫ ಗಂಟೆಗೆ ನಾಗಪುರದಲ್ಲಿ ಡಾಕ್ಟರ್ಜಿಯವರ ವಿರಾಟ್ ಶವಯಾತ್ರೆ. ಸಹಸ್ರಾವಧಿ ಸ್ವಯಂಸೇವಕರು ಹಾಗೂ ನಾಗರಿಕರು ಪಾಲ್ಗೊಂಡಿದ್ದರು. ಹಿಂದೆಂದೂ ಕಂಡಿರದಷ್ಟು ಉದ್ದದ ಸಾಲು. ಎಲ್ಲವೂ ಶಾಂತ ಸಹಜ ಅನುಶಾಸನ ಬದ್ಧ.
ಮಾರ್ಗದುದ್ದಕ್ಕೂ ಎಲ್ಲಿ ನೋಡಿದರಲ್ಲಿ ಜನಸಂದಣಿ. ಜಾತಿ, ಪಕ್ಷ, ಪಂಥಗಳ ಭೇದ ಮರೆತು ಎಲ್ಲರಿಂದ ಡಾಕ್ಟರ್ಜಿಯವರ ಕಳೇಬರಕ್ಕೆ ಹಾರ, ಪುಷ್ಪಗುಚ್ಛ ಸಮರ್ಪಣೆ, ಹೂವಿನ ಮಳೆ. ’ರೇಶಿಂಬಾಗ್’ ಮೈದಾನಕ್ಕೆ ೯ ಗಂಟೆಗೆ ಶವಯಾತ್ರೆ ತಲುಪಿತು.
ರೇಶಿಂಬಾಗ್ ಅವರ ಕರ್ಮಭೂಮಿ. ಆ ಮೈದಾನವನ್ನು ತಾವೇ ಹಣ ಕೂಡಿಸಿ ಸಂಘಕ್ಕಾಗಿ ಕೊಂಡಿದ್ದರು. ಅದೆಷ್ಟು ಸಂಘ ಶಿಕ್ಷಾ ವರ್ಗಗಳು, ಉತ್ಸವಗಳು ಅಲ್ಲಿ ನಡೆದಿದ್ದವೋ? ಆ ನೆಲದ ಕಣ ಕಣವೂ ಡಾಕ್ಟರ್ಜಿಯವರ ನಡೆದಾಟ, ಬೆವರಿನಿಂದ ಪವಿತ್ರ. ಡಾಕ್ಟರ್ಜಿಯವರ ಧ್ವನಿಯಿಂದ ಅಲ್ಲಿನ ವಾತಾವರಣವೆಲ್ಲ ಅನುರಣಿತ, ಅದೇ ಪವಿತ್ರ ಸ್ಥಾನದಲ್ಲಿ ಈಗ ಡಾಕ್ಟರ್ಜಿಯವರ ಪಾರ್ಥಿವ ದೇಹವೂ ಅಗ್ನಿಗರ್ಪಿತವಾಯಿತು. ಧ್ಯೇಯಾಗ್ನಿಯಿಂದ ಪ್ರಜ್ವಲಿಸುತ್ತಿದ್ದ ಆ ದೇಹ ಧಗಧಗಿಸುವ ಅಗ್ನಿ ನಾರಾಯಣನಲ್ಲಿ ಒಂದಾಯಿತು. ಎಲ್ಲೆಲ್ಲೂ ದುಃಖದ ಛಾಯೆ ಆವರಿಸಿತು.
Labels: Doctorji, Last Journey, Sangha Story, ಡಾಕ್ಟರ್ಜಿ, ಮಹಾಪ್ರಾಯಾಣ, ಸಂಘದ ಕಥೆ
೧೯೪೦ ಜೂನ್ ೨೧ರ ಸಂಜೆ ೫ ಗಂಟೆಗೆ ನಾಗಪುರದಲ್ಲಿ ಡಾಕ್ಟರ್ಜಿಯವರ ವಿರಾಟ್ ಶವಯಾತ್ರೆ. ಸಹಸ್ರಾವಧಿ ಸ್ವಯಂಸೇವಕರು ಹಾಗೂ ನಾಗರಿಕರು ಪಾಲ್ಗೊಂಡಿದ್ದರು. ಹಿಂದೆಂದೂ ಕಂಡಿರದಷ್ಟು ಉದ್ದದ ಸಾಲು. ಎಲ್ಲವೂ ಶಾಂತ ಸಹಜ ಅನುಶಾಸನ ಬದ್ಧ.
ಮಾರ್ಗದುದ್ದಕ್ಕೂ ಎಲ್ಲಿ ನೋಡಿದರಲ್ಲಿ ಜನಸಂದಣಿ. ಜಾತಿ, ಪಕ್ಷ, ಪಂಥಗಳ ಭೇದ ಮರೆತು ಎಲ್ಲರಿಂದ ಡಾಕ್ಟರ್ಜಿಯವರ ಕಳೇಬರಕ್ಕೆ ಹಾರ, ಪುಷ್ಪಗುಚ್ಛ ಸಮರ್ಪಣೆ, ಹೂವಿನ ಮಳೆ. ’ರೇಶಿಂಬಾಗ್’ ಮೈದಾನಕ್ಕೆ ೯ ಗಂಟೆಗೆ ಶವಯಾತ್ರೆ ತಲುಪಿತು.
ರೇಶಿಂಬಾಗ್ ಅವರ ಕರ್ಮಭೂಮಿ. ಆ ಮೈದಾನವನ್ನು ತಾವೇ ಹಣ ಕೂಡಿಸಿ ಸಂಘಕ್ಕಾಗಿ ಕೊಂಡಿದ್ದರು. ಅದೆಷ್ಟು ಸಂಘ ಶಿಕ್ಷಾ ವರ್ಗಗಳು, ಉತ್ಸವಗಳು ಅಲ್ಲಿ ನಡೆದಿದ್ದವೋ? ಆ ನೆಲದ ಕಣ ಕಣವೂ ಡಾಕ್ಟರ್ಜಿಯವರ ನಡೆದಾಟ, ಬೆವರಿನಿಂದ ಪವಿತ್ರ. ಡಾಕ್ಟರ್ಜಿಯವರ ಧ್ವನಿಯಿಂದ ಅಲ್ಲಿನ ವಾತಾವರಣವೆಲ್ಲ ಅನುರಣಿತ, ಅದೇ ಪವಿತ್ರ ಸ್ಥಾನದಲ್ಲಿ ಈಗ ಡಾಕ್ಟರ್ಜಿಯವರ ಪಾರ್ಥಿವ ದೇಹವೂ ಅಗ್ನಿಗರ್ಪಿತವಾಯಿತು. ಧ್ಯೇಯಾಗ್ನಿಯಿಂದ ಪ್ರಜ್ವಲಿಸುತ್ತಿದ್ದ ಆ ದೇಹ ಧಗಧಗಿಸುವ ಅಗ್ನಿ ನಾರಾಯಣನಲ್ಲಿ ಒಂದಾಯಿತು. ಎಲ್ಲೆಲ್ಲೂ ದುಃಖದ ಛಾಯೆ ಆವರಿಸಿತು.
Labels: Doctorji, Last Journey, Sangha Story, ಡಾಕ್ಟರ್ಜಿ, ಮಹಾಪ್ರಾಯಾಣ, ಸಂಘದ ಕಥೆ
No comments:
Post a Comment