Sunday, November 25, 2012

೧೦೪. ಸಿದ್ಧಾಂತದಲ್ಲಿ ನಂಬಿಕೆ

ಸಿದ್ಧಾಂತದಲ್ಲಿ ನಂಬಿಕೆ

   ಸ್ವಯಂಸೇವಕರು ಜಾತಿ ಇತ್ಯಾದಿಗಳಿಂದ ಪ್ರಭಾವಿತರಾಗುವುದಿಲ್ಲ ಎನ್ನುವುದಕ್ಕೆ ದೀನದಯಾಳರ ಉದಾಹರಣೆ. ಎಲ್ಲರೂ ಬಹಳ ಆಗ್ರಹ ಪಡಿಸಿದ್ದರಿಂದ ದೀನದಯಾಳರು ಚುನಾವಣೆಗೆ ನಿಂತರು. ಚುನಾವಣೆಯಲ್ಲಿ ಬೇರೆ ಎಲ್ಲರೂ ಜಾತಿ ಹೆಸರಿನಲ್ಲಿ ಪ್ರಚಾರ ಮಾಡಿದರು. ಕೆಲವರು ಒಂದು ರಾತ್ರಿ ಬೈಠಕ್‍ನಲ್ಲಿ ಕುಳಿತಾಗ ದೀನದಯಾಳರಲ್ಲಿ ಹೇಳಿದರು ’ನಾವು ನಿಮ್ಮ ಜಾತಿಯ ವಿಷಯವಾಗಿ ಹೇಳಿದರೆ ನಮಗೆ ಚುನಾವಣೆಯಲ್ಲಿ ಅನುಕೂಲವಾಗಬಹುದು’ ಎಂದು. ಆಗ ದೀನದಯಾಳರು ಜಾತಿಯ ವಿಷಯವನ್ನು ತಂದರೆ ತಾವು ಚುನಾವಣೆಯಿಂದ ಹೊರಬರುವುದಾಗಿ ಹೇಳಿದರು. ’ನಾನು ಸಂಘದ ಸ್ವಯಂಸೇವಕ. ಜಾತಿಯ ಹೆಸರಿನಲ್ಲಿ ಪ್ರಚಾರ ಮಾಡುವುದಾದರೆ, ನನಗೆ ಈ ಚುನಾವಣೆ ಬೇಡ’ ಎಂದರು.

    ನಂತರ ಚುನಾವಣೆಯಲ್ಲಿ ಅವರು ಸೋತರು. ಅದರಿಂದ ದೀನದಯಾಳರಿಗಾಗಲೀ, ಬೇರೆಯವರಿಗಾಗಲೀ ಎನೂ ಪ್ರಭಾವವಾಗಲಿಲ್ಲ. ಏಕೆಂದರೆ ’ನಾವು ಸಿದ್ಧಾಂತಕ್ಕಾಗಿ ನಿಂತಿರುವಂತಹವರು. ಸಿದ್ಧಾಂತದಲ್ಲಿ ಒಪ್ಪಂದ ಮಾಡಿಕೊಂಡು ಗೆಲ್ಲುವುದನ್ನು ನಾವು ಬಯಸಬೇಕಿಲ್ಲ’ ಎಂದು ಎಲ್ಲರೂ ತಿಳಿದಿದ್ದರು.

Labels: Deendayal Upadhyaya, Election, Loss, Principles, Sangha Story, ಚುನಾವಣೆ, ದೀನದಯಾಳ ಉಪಾಧ್ಯಾಯ, ಸಂಘದ ಕಥೆ, ಸಿದ್ಧಾಂತ, ಸೋಲು

No comments:

Post a Comment