’ಮನುಷ್ಯನೋ ಭೂತವೋ?’
ಅದೊಂದು ದಿನ ಕಾಲೇಜಿನಲ್ಲಿ ಓರ್ವ ಪ್ರಾಧ್ಯಾಪಕರು ಇನ್ನೂ ತರಗತಿಗೆ ಬಂದಿರಲಿಲ್ಲ. ವಿದ್ಯಾರ್ಥಿಗಳೆಲ್ಲ ಗುಂಪು ಗುಂಪಾಗಿ ಹರಟೆ ಹೊಡೆಯುತ್ತಿದ್ದರು. ಅಮೂಲ್ಯ ಘೋಷ್ ಆ ತರಗತಿಯ ಇನ್ನೋರ್ವ ವಿದ್ಯಾರ್ಥಿ. ಆತ ಸಹ ಕಟ್ಟುಮಸ್ತಾದ ಆಳು. ನಿತ್ಯ ವ್ಯಾಯಾಮ ಮಾಡುತ್ತಿದ್ದ ದೃಡಕಾಯ. ಇದ್ದಕ್ಕಿದ್ದಂತೆ ಆತ ಆತ ಕೇಶವರಾಯರೆದುರು ಬಂದು ’ರೀ, ಹೆಡ್ಗೆವಾರ್, ನಿಮ್ಮ ಶಕ್ತಿ ಕುರಿತು ಹಲವರು ಹೊಗಳುವರು. ಅದು ಹೇಗಿದೆ ನಾನೂ ಸ್ವಲ್ಪ ನೋಡುವೆ, ನನ್ನ ಭುಜದ ಮೇಲೆ ಹೊಡೆಯಿರಿ ನೋಡೋಣ?’ ಸವಾಲಿನ ಧ್ವನಿಯಲ್ಲಿ ಕೆಣಕಿದ.
"ಮೊದಲು ನೀವು ನನ್ನ ಭುಜದ ಮೇಲೆ ಹೊಡೆಯಿರಿ. ನಂತರ ನಾನು" ಕೇಶವರಾಯರೆಂದರು.
ಘೋಷ್ ಒಪ್ಪಿದ. ಕೇಶವರಾವ್ ಭುಜ ಎತ್ತಿ ನಿಂತರು. ಆತ ಮುಷ್ಠಿ ಎತ್ತಿ ಹೊಡೆಯತೊಡಗಿದ. ತರಗತಿಯ ವಿದ್ಯಾರ್ಥಿಗಳೆಲ್ಲ ಕುತೂಹಲದಿಂದ ಸುತ್ತ ನೆರೆದರು. ಹತ್ತು...... ಇಪ್ಪತ್ತು...... ಐವತ್ತು...... ನೂರು...... ಗುದ್ದುಗಳ ಸತತ ಸುರಿಮಳೆ.
ಗುದ್ದುತ್ತಾ ಗುದ್ದುತ್ತಾ ಅಮೂಲ್ಯ ಘೋಷ್ ಸುಸ್ತಾದ. ಆದರೆ ಕೇಶವರಾವ್ ನಿಂತಲ್ಲಿಂದ ಸ್ವಲ್ಪವೂ ಕದಲಲಿಲ್ಲ. ವಿದ್ಯಾರ್ಥಿಗಳೆಲ್ಲ ಅಚ್ಚರಿಗೊಂಡರು. ಕೇಶವರಾಯರನ್ನು ಹೊಗಳತೊಡಗಿದರು.
ಅದಾದ ಮೇಲೆ ಕೇಶವರಾಯರ ಸರದಿ. ತಮ್ಮ ವಜ್ರಮುಷ್ಥಿ ಬಿಗಿದರು. ಬಿದ್ದುದ್ದು ಒಂದೇ ಹೊಡೆತ. ಅಮೂಲ್ಯ ಘೋಷ್ "ಸ್ಪರ್ಧೆ ಸಾಕು" ಎಂದು ಉದ್ಗರಿಸಿದ.
ಘೋಷ್ ಕೈ ಮುಗಿದು ಹೇಳಿದ "ನೀನೇನು ಮನುಷ್ಯನೋ ಭೂತವೋ? ನಿನ್ನ ಮೈಯಲ್ಲಿರುವುದು ಮಾಂಸವೋ ಕಬ್ಬಿಣವೋ?" ಎಲ್ಲಾ ವಿದ್ಯಾರ್ಥಿಗಳೂ ನಗತೊಡಗಿದರು. "ನೀನು ಶಿವಾಜಿಯ ನಾಡಿನಿಂದ ಬಂದವನೆಂದು ನಾವೆಲ್ಲ ಒಪ್ಪಿದೆವು" ಎಂದು ಘೋಷ್ ಹೆಡಗೆವಾರರನ್ನು ಆಲಂಗಿಸಿದ.
"ಮೊದಲು ನೀವು ನನ್ನ ಭುಜದ ಮೇಲೆ ಹೊಡೆಯಿರಿ. ನಂತರ ನಾನು" ಕೇಶವರಾಯರೆಂದರು.
ಘೋಷ್ ಒಪ್ಪಿದ. ಕೇಶವರಾವ್ ಭುಜ ಎತ್ತಿ ನಿಂತರು. ಆತ ಮುಷ್ಠಿ ಎತ್ತಿ ಹೊಡೆಯತೊಡಗಿದ. ತರಗತಿಯ ವಿದ್ಯಾರ್ಥಿಗಳೆಲ್ಲ ಕುತೂಹಲದಿಂದ ಸುತ್ತ ನೆರೆದರು. ಹತ್ತು...... ಇಪ್ಪತ್ತು...... ಐವತ್ತು...... ನೂರು...... ಗುದ್ದುಗಳ ಸತತ ಸುರಿಮಳೆ.
ಗುದ್ದುತ್ತಾ ಗುದ್ದುತ್ತಾ ಅಮೂಲ್ಯ ಘೋಷ್ ಸುಸ್ತಾದ. ಆದರೆ ಕೇಶವರಾವ್ ನಿಂತಲ್ಲಿಂದ ಸ್ವಲ್ಪವೂ ಕದಲಲಿಲ್ಲ. ವಿದ್ಯಾರ್ಥಿಗಳೆಲ್ಲ ಅಚ್ಚರಿಗೊಂಡರು. ಕೇಶವರಾಯರನ್ನು ಹೊಗಳತೊಡಗಿದರು.
ಅದಾದ ಮೇಲೆ ಕೇಶವರಾಯರ ಸರದಿ. ತಮ್ಮ ವಜ್ರಮುಷ್ಥಿ ಬಿಗಿದರು. ಬಿದ್ದುದ್ದು ಒಂದೇ ಹೊಡೆತ. ಅಮೂಲ್ಯ ಘೋಷ್ "ಸ್ಪರ್ಧೆ ಸಾಕು" ಎಂದು ಉದ್ಗರಿಸಿದ.
ಘೋಷ್ ಕೈ ಮುಗಿದು ಹೇಳಿದ "ನೀನೇನು ಮನುಷ್ಯನೋ ಭೂತವೋ? ನಿನ್ನ ಮೈಯಲ್ಲಿರುವುದು ಮಾಂಸವೋ ಕಬ್ಬಿಣವೋ?" ಎಲ್ಲಾ ವಿದ್ಯಾರ್ಥಿಗಳೂ ನಗತೊಡಗಿದರು. "ನೀನು ಶಿವಾಜಿಯ ನಾಡಿನಿಂದ ಬಂದವನೆಂದು ನಾವೆಲ್ಲ ಒಪ್ಪಿದೆವು" ಎಂದು ಘೋಷ್ ಹೆಡಗೆವಾರರನ್ನು ಆಲಂಗಿಸಿದ.
No comments:
Post a Comment