ಸೇರಿಗೆ ಸವ್ವಾಸೇರು
ಬೇರೆಡೆಯಿಂದ ಕಲ್ಕತ್ತೆಗೆ ಓದಲು ಬಂದ ವಿದ್ಯಾರ್ಥಿಗಳು ಒಂದು ಮನೆಯನ್ನೇ ಬಾಡಿಗೆಗೆ ಪಡೆದಿದ್ದರು. ಅವರಲ್ಲಿರುವುದು. ಆಮೊಹಲ್ಲೆಯ ಕೆಲವರಿಗೆ ಹಿಡಿಸುತ್ತಿರಲಿಲ್ಲ. ಕೆಲವು ಗೂಂಡಾಗಳನ್ನು ಪುಸಲಾಯಿಸಿದರು. ಆ ಹುಡುಗರಿಗೆ ತೊಂದರೆ ಆರಂಭವಾಯಿತು. ರಾತ್ರಿಮನೆಯ ಮೇಲೆ ಕಲ್ಲು ಬೀಳಲಾರಂಭಿಸಿತು. ಕೆಲವು ದೊಡ್ಡ ಹುಡುಗರು ಸೇರಿ ಹತ್ತಿರದ ಮನೆಗಳಿಗೆ ಹೋದರು. ’ನಾವು ಯಾರಿಗೂ ತೊಂದರೆ ನಿಮಗೆ ಕೊಡುತ್ತಿರುವರೋ ನಮಗಂತೂ ತಿಳಿಯದು’ ಎಂದು ಬಿಟ್ಟರು. ಮರುದಿನವೂ ಕಲ್ಲುಗಳು ಬಿದ್ದವು. ಮೂರನೇ ದಿನ ಮತ್ತಷ್ಟು ಹೆಚ್ಚಿತು. ವಿದ್ಯಾರ್ಥಿಗಳೆಲ್ಲ ಹೆದರಿದರು. ಒಬ್ಬನೆಂದ - ’ಇವೆಷ್ಟು ದೊಡ್ಡ ಕಲ್ಲುಗಳು! ತಲೆಯ ಮೇಲೆ ಬಿದ್ದರೆ ಸಾವು ಖಂಡಿತ’ ’ನಾವು ದೂರ ದೂರದಿಂದ ಇಲ್ಲಿ ಬಂದವರು. ಇಲ್ಲಿನವರೊಂದಿಗೆ ನಮಗೇಕೆ ಜಗಳ? ನೀರಿನಲ್ಲಿದ್ದು ಮೀನು ಮೊಸಳೆಗಳೊಡನೆ ವೈರ ಸಾಧಿಸಲು ಬಂದೀತೆ?’ ಮತ್ತೊಬ್ಬನೆಂದ.
ಮೂರನೆಯವ ’ಇದೇನು, ಮಾರಣ ಪ್ರಯೋಗವಲ್ಲವಷ್ಟೇ? ಬಂಗಾಲ ಮಂತ್ರ ವಿದ್ಯೆಗೆ ಪ್ರಸಿದ್ಧ ತಾನೇ?’ ಎಂದು ಶಂಕೆ ವ್ಯಕ್ತಪಡಿಸಿದ.
ನಾಲ್ಕನೆಯವ ನಿರ್ಣಾಯಕವಾಗಿ ನುಡಿದ "ಇಲ್ಲಿನವರಿಗೆ ನಾವಿರುವುದು ಬೇಡವೆನಿಸಿದರೆ ಬೇರೆ ಕಡೆ ಹೋಗೋಣ." ಹೀಗೆ ಹತ್ತು ಹಲವು ತರ ಮಾತುಕತೆ ನಡೆಯುತ್ತಿತ್ತು. ಕೇಶವರಾಯರೆಂದರು - "ಹೆದರಬೇಡಿ. ಈ ಕೆಲಸ ನನಗೊಪ್ಪಿಸಿ ಅದೇಕೆ ಕಲ್ಲು ತೂರಾಟ ನಿಲ್ಲದು? ನಾನು ನೋಡುವೆ."
ಆ ರಾತ್ರಿ ಎಂದಿನಂತೆಯೇ ಮೊದಲು ಕಲ್ಲು ಬಂತು. ಕೇಶವರಾವ್ ಓಡುತ್ತಾ ಹೊರ ಬಂದರು. ಎದುರು ಸಿಕ್ಕಿದವನನ್ನು ಹಿಡಿದು ಚೆನ್ನಾಗಿ ಚಚ್ಚತೊಡಗಿದರು. ’ಅಯ್ಯೋ ಸತ್ತೇ - ಸತ್ತೇ ..... ಬಿಡಿಸಿ’ ಆತ ಕೂಗತೊಡಗಿದ. ಚೀರಾಟ ಕೇಳಿ ಕೇರಿಯ ಜನರೆಲ್ಲ ಒಟ್ಟಾದರು. ಅವರಲ್ಲಿ ಓರ್ವ ಹೇಳಿದ "ಇವನಿಗ್ಯಾಕೆ ಹೊಡೆಯುತ್ತೀರಿ? ಈತ ಒಳ್ಳೆಯವ ನಿಮಗೇನು ಮಾಡಿದ್ದಾನೆ?"
ಕೇಶವರಾಯರು ಹೊಡೆತ ನಿಲ್ಲಿಸಿದರು. ಜನರ ಮಧ್ಯೆ ನಿಂತರು. ಗಡಸು ಧ್ವನಿಯಲ್ಲಿ ಅವರೆಂದರು - ’ನಾವು ನಿಮ್ಮ ಕೇರಿಯಲ್ಲೇ ವಾಸಿಸುತ್ತೇವೆ. ನಮ್ಮ ಮನೆ ಮೇಲೆ ಕಲ್ಲು ಬಿದ್ದಾಗಲೂ ನೀವೆಲ್ಲ ತೆಪ್ಪನೆ ಕುಳಿತಿದ್ದಿರಿ ಏಕೆ? ಕೇಳಿದರೆ ನಮಗೇನು ಗೊತ್ತು ಎನ್ನುತ್ತೀರಿ. ನಾನಿದನ್ನೆಲ್ಲ ನಡೆಯಗೊಡುವುದಿಲ್ಲ. ನಮ್ಮ ಮನೆ ಮೇಲೆ ಕಲ್ಲು ಬೀಳುವುದಕ್ಕೆ ಕೇರಿಯ ಜನರೆಲ್ಲ ಜವಾಬ್ದಾರರು. ಹೀಗೆಯೇ ನಿತ್ಯ ಕಲ್ಲು ಬೀಳುತ್ತಿದ್ದರೆ ನಾನೂ ಸಿಕ್ಕಸಿಕ್ಕವರಿಗೆ ಹೊಡೆಯುವುದು ಖಂಡಿತ."
ಜನರೆಲ್ಲ ತಂತಮ್ಮ ಮನೆಗಳಿಗೆ ನಡೆದರು. ಎಲ್ಲ ಮನೆಗಳಲ್ಲೂ ಕೇಶವರಾಯರ ಶಕ್ತಿ. ಸಾಹಸಗಳದ್ದೇ ಚರ್ಚೆ. ಆ ನಂತರ ಮನೆಯ ಮೇಲೆ ಕಲ್ಲು ಎಂದೂ ಬೀಳಲಿಲ್ಲ.
ಮೂರನೆಯವ ’ಇದೇನು, ಮಾರಣ ಪ್ರಯೋಗವಲ್ಲವಷ್ಟೇ? ಬಂಗಾಲ ಮಂತ್ರ ವಿದ್ಯೆಗೆ ಪ್ರಸಿದ್ಧ ತಾನೇ?’ ಎಂದು ಶಂಕೆ ವ್ಯಕ್ತಪಡಿಸಿದ.
ನಾಲ್ಕನೆಯವ ನಿರ್ಣಾಯಕವಾಗಿ ನುಡಿದ "ಇಲ್ಲಿನವರಿಗೆ ನಾವಿರುವುದು ಬೇಡವೆನಿಸಿದರೆ ಬೇರೆ ಕಡೆ ಹೋಗೋಣ." ಹೀಗೆ ಹತ್ತು ಹಲವು ತರ ಮಾತುಕತೆ ನಡೆಯುತ್ತಿತ್ತು. ಕೇಶವರಾಯರೆಂದರು - "ಹೆದರಬೇಡಿ. ಈ ಕೆಲಸ ನನಗೊಪ್ಪಿಸಿ ಅದೇಕೆ ಕಲ್ಲು ತೂರಾಟ ನಿಲ್ಲದು? ನಾನು ನೋಡುವೆ."
ಆ ರಾತ್ರಿ ಎಂದಿನಂತೆಯೇ ಮೊದಲು ಕಲ್ಲು ಬಂತು. ಕೇಶವರಾವ್ ಓಡುತ್ತಾ ಹೊರ ಬಂದರು. ಎದುರು ಸಿಕ್ಕಿದವನನ್ನು ಹಿಡಿದು ಚೆನ್ನಾಗಿ ಚಚ್ಚತೊಡಗಿದರು. ’ಅಯ್ಯೋ ಸತ್ತೇ - ಸತ್ತೇ ..... ಬಿಡಿಸಿ’ ಆತ ಕೂಗತೊಡಗಿದ. ಚೀರಾಟ ಕೇಳಿ ಕೇರಿಯ ಜನರೆಲ್ಲ ಒಟ್ಟಾದರು. ಅವರಲ್ಲಿ ಓರ್ವ ಹೇಳಿದ "ಇವನಿಗ್ಯಾಕೆ ಹೊಡೆಯುತ್ತೀರಿ? ಈತ ಒಳ್ಳೆಯವ ನಿಮಗೇನು ಮಾಡಿದ್ದಾನೆ?"
ಕೇಶವರಾಯರು ಹೊಡೆತ ನಿಲ್ಲಿಸಿದರು. ಜನರ ಮಧ್ಯೆ ನಿಂತರು. ಗಡಸು ಧ್ವನಿಯಲ್ಲಿ ಅವರೆಂದರು - ’ನಾವು ನಿಮ್ಮ ಕೇರಿಯಲ್ಲೇ ವಾಸಿಸುತ್ತೇವೆ. ನಮ್ಮ ಮನೆ ಮೇಲೆ ಕಲ್ಲು ಬಿದ್ದಾಗಲೂ ನೀವೆಲ್ಲ ತೆಪ್ಪನೆ ಕುಳಿತಿದ್ದಿರಿ ಏಕೆ? ಕೇಳಿದರೆ ನಮಗೇನು ಗೊತ್ತು ಎನ್ನುತ್ತೀರಿ. ನಾನಿದನ್ನೆಲ್ಲ ನಡೆಯಗೊಡುವುದಿಲ್ಲ. ನಮ್ಮ ಮನೆ ಮೇಲೆ ಕಲ್ಲು ಬೀಳುವುದಕ್ಕೆ ಕೇರಿಯ ಜನರೆಲ್ಲ ಜವಾಬ್ದಾರರು. ಹೀಗೆಯೇ ನಿತ್ಯ ಕಲ್ಲು ಬೀಳುತ್ತಿದ್ದರೆ ನಾನೂ ಸಿಕ್ಕಸಿಕ್ಕವರಿಗೆ ಹೊಡೆಯುವುದು ಖಂಡಿತ."
ಜನರೆಲ್ಲ ತಂತಮ್ಮ ಮನೆಗಳಿಗೆ ನಡೆದರು. ಎಲ್ಲ ಮನೆಗಳಲ್ಲೂ ಕೇಶವರಾಯರ ಶಕ್ತಿ. ಸಾಹಸಗಳದ್ದೇ ಚರ್ಚೆ. ಆ ನಂತರ ಮನೆಯ ಮೇಲೆ ಕಲ್ಲು ಎಂದೂ ಬೀಳಲಿಲ್ಲ.
No comments:
Post a Comment