ಸೇವಕಾರ್ಯ
ನಮ್ಮ ದೇಶದ ಬಹು ದೊಡ್ಡ ನದಿಗಳೆಲ್ಲ ಹರಿಯುತ್ತಿರುವುದು ಬಂಗಾಲದಲ್ಲಿ. ಗಂಗಾ-ಬ್ರಹ್ಮಪುತ್ರಾ ಸಂಗಮ ಇರುವುದು ಇಲ್ಲಿಯೇ. ಹಲವು ಉಪನದಿಗಳೂ ಇವುಗಳನ್ನು ಸೇರುತ್ತವೆ. ಮಳೆಗಾಲದಲ್ಲಿ ಈ ನದಿಗಳು ಉಕ್ಕಿ ಹರಿದಾಗ ಬಂಗಾಳದ ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ.
೧೯೧೩ರಲ್ಲಿ ಬಂಗಾಲದಲ್ಲಿ ಬಂದ ಪ್ರವಾಹ ಬಹು ಭಯಾನಕ. ಎಲ್ಲಿ ನೋಡಿದರಲ್ಲಿ ನೀರೇ ನೀರು. ಹಳ್ಳಿ ಹಳ್ಳಿಗಳೇ ಮುಳುಗಿದ್ದವು. ಬೆಳೆದು ನಿಂತು ಪೈರು ಪಚ್ಚೆಗಳೆಲ್ಲ ಕೊಚ್ಚಿ ಹೋಗಿದ್ದವು. ಸಾವಿರಾರು ದನಕರುಗಳು ನೀರುಪಾಲ. ಸಾವು ನೋವುಗಳಿಗೆ ಲೆಕ್ಕವೇ ಇಲ್ಲ. ಮನೆ ಮಠ ಕಳೆದುಕೊಂಡು ನಿರ್ಗತಿಕರಾದವರು ಲಕ್ಷಾಂತರ. ಆಗ ಇದ್ದದು ಆಂಗ್ಲರ ಅಧಿಕಾರ. ಇಲ್ಲಿನವರ ಬವಣೆ ಕಷ್ಟಗಳ ಕುರಿತು ಅವರಿಗೆ ಚಿಂತೆಯೇ ಇರಲಿಲ್ಲ.
ಕಲ್ಕತ್ತೆಯ ಬೀದಿಗಳೆಲ್ಲ ನಿರ್ಗತಿಕರಿಂದಲೇ ತುಂಬಿಹೋದವು. ಮನೆ ಮನೆ ಅಲೆಯುತ್ತಿದ್ದ ಅವರ ಹಸಿವಿನ ಕೂಗು ಕರುಣಾಜನಕ. ಈ ದೃಶ್ಯ ಹಲವು ತರುಣರ ಮನ ಕಲಕಿತು. ನಿರ್ಗತಿಕರ ಸೇವೆಗಾಗಿ ಅವರು ಎದ್ದು ನಿಂತರು. ಅಂತಹವರಲ್ಲಿ ಕೇಶವರಾಯರೇ ಮೊದಲಿಗರು. ತಮ್ಮ ಅಧ್ಯಯನ ನಿಲ್ಲಿಸಿ ಅವರು ಹೊರಬಮ್ದರು. ಊಟ, ನಿದ್ದೆ, ವಿಶ್ರಾಂತಿಗಳಿಲ್ಲದೇ ಅವರ ಶಕ್ತಿ ಸಮಯಗಳು ಸೇವೆಗೆ ಮುಡಿಪಾದವು. ಶ್ರೀ ರಾಮಕೃಷ್ಣಾಶ್ರಮದ ಮೂಲಕ ಅವರ ಸೇವೆ ಆರಂಭವಾಯಿತು.
ಕೇಶವರಾಯರು ಬಂಗಾಳದ ನೂರಾರು ನೆರೆಪೀಡಿತ ಹಳ್ಳಿಗಳಲ್ಲಿ ಓಡಾಡಿದರು. ಕೆಲವೆಡೆ ಅಂತೂ ತುಂಬು ಪ್ರವಾಹದಲ್ಲಿ ಈಜಿ ಹೋಗುತ್ತಿದ್ದುದೂ ಉಂಟು. ಹಗಲಿರುಳೆನ್ನದೆ ಕೆಸರು ತುಂಬಿದ ದಾರಿಗಳಲ್ಲಿ ಓಡಾಟ. ಮುಳುಗುತ್ತಿದ್ದ ನೂರಾರು ಬಂಧುಗಳನ್ನು ಸಾವಿನ ದವಡೆಯಿಂದ ತಪ್ಪಿಸಿ ಎಳೆದು ತಂದರು. ದಿನವೆಲ್ಲ ಅಂತಹವರ ಸೇವೆಯಲ್ಲಿಯೇ ಕಳೆಯುತ್ತಿತ್ತು. ಒಂದೆರಡು ಘಂಟೆ ನಿದ್ದೆ. ತುತ್ತು ಕೂಳು. ಮತ್ತೆ ಓಡಾಟ.
ಕಟ್ಟು ಮಸ್ತಾದ ಶರೀರ ಅವರದು. ದಣಿವರಿಯದೆ, ಸೋಲೊಪ್ಪದ ಅವರು ಸಾವು ಬದುಕಿನ ಹೋರಾಟದಲ್ಲಿದ್ದ ಸಾವಿರಾರು ಹಳ್ಳಿಗರ ಸೇವೆಗೈದರು. ಬಂಗಾಳಿ ಅವರಿಗೆ ತಾಯಿನುಡಿಯಷ್ಟು ಸಲೀಸು. ಹಾಗಾಗಿ ಅವರಿಗೆ ಎಲ್ಲರ ಹತ್ತಿರವೂ ಹೋಗಲು ಸಾಧ್ಯವಾಯಿತು. ಸೇವೆಯ ವೇಳೆ ಅವರ ಬಳಿ ಅಹಂಕಾರ ಎಂದೂ ಸುಳಿಯಲಿಲ್ಲ. ಅವರ ಪಾಲಿಗೆ ಅದೊಂದು ಪರೋಪಕಾರದ ಕೆಲಸವೂ ಎನಿಸಲಿಲ್ಲ. ಸೇವೆಯನ್ನು ತಮ್ಮ ಸಹಜ ಕರ್ತವ್ಯವೆಂದೇ ಬಗೆದವರು ಅವರು. "ಇವರೆಲ್ಲ ಬೇರೆಯವರೇನು? ನಮ್ಮ ಬಂಧು ಬಾಂಧವರೇ" ಎನ್ನುತ್ತಿದ್ದರು.
ಕೇಶವರಾಯರೊಂದಿಗೆ ಕೆಲಸ ಮಾಡುವುದೇ ಜೊತೆಗಾರರಿಗೆಲ್ಲ ಒಂದು ಆನಂದ. ಅವರ ಏಕಾಗ್ರತೆ, ಕಾರ್ಯ ತತ್ಪರತೆ ನೋಡಿ ಮಿತ್ರರಲ್ಲಿ ಬೆರೆಗಾದರು. ತಮ್ಮ ನಾಯಕನ ಬಗ್ಗೆ ಅವರಿಗೆಲ್ಲ ತುಂಬ ಅಭಿಮಾನ. ಕೇಶವರಾಯರ ಮಾತು ಅವರಿಗೆಲ್ಲಾ ಮೀರಲಾಗದ ಆಣತಿ.
೧೯೧೩ರಲ್ಲಿ ಬಂಗಾಲದಲ್ಲಿ ಬಂದ ಪ್ರವಾಹ ಬಹು ಭಯಾನಕ. ಎಲ್ಲಿ ನೋಡಿದರಲ್ಲಿ ನೀರೇ ನೀರು. ಹಳ್ಳಿ ಹಳ್ಳಿಗಳೇ ಮುಳುಗಿದ್ದವು. ಬೆಳೆದು ನಿಂತು ಪೈರು ಪಚ್ಚೆಗಳೆಲ್ಲ ಕೊಚ್ಚಿ ಹೋಗಿದ್ದವು. ಸಾವಿರಾರು ದನಕರುಗಳು ನೀರುಪಾಲ. ಸಾವು ನೋವುಗಳಿಗೆ ಲೆಕ್ಕವೇ ಇಲ್ಲ. ಮನೆ ಮಠ ಕಳೆದುಕೊಂಡು ನಿರ್ಗತಿಕರಾದವರು ಲಕ್ಷಾಂತರ. ಆಗ ಇದ್ದದು ಆಂಗ್ಲರ ಅಧಿಕಾರ. ಇಲ್ಲಿನವರ ಬವಣೆ ಕಷ್ಟಗಳ ಕುರಿತು ಅವರಿಗೆ ಚಿಂತೆಯೇ ಇರಲಿಲ್ಲ.
ಕಲ್ಕತ್ತೆಯ ಬೀದಿಗಳೆಲ್ಲ ನಿರ್ಗತಿಕರಿಂದಲೇ ತುಂಬಿಹೋದವು. ಮನೆ ಮನೆ ಅಲೆಯುತ್ತಿದ್ದ ಅವರ ಹಸಿವಿನ ಕೂಗು ಕರುಣಾಜನಕ. ಈ ದೃಶ್ಯ ಹಲವು ತರುಣರ ಮನ ಕಲಕಿತು. ನಿರ್ಗತಿಕರ ಸೇವೆಗಾಗಿ ಅವರು ಎದ್ದು ನಿಂತರು. ಅಂತಹವರಲ್ಲಿ ಕೇಶವರಾಯರೇ ಮೊದಲಿಗರು. ತಮ್ಮ ಅಧ್ಯಯನ ನಿಲ್ಲಿಸಿ ಅವರು ಹೊರಬಮ್ದರು. ಊಟ, ನಿದ್ದೆ, ವಿಶ್ರಾಂತಿಗಳಿಲ್ಲದೇ ಅವರ ಶಕ್ತಿ ಸಮಯಗಳು ಸೇವೆಗೆ ಮುಡಿಪಾದವು. ಶ್ರೀ ರಾಮಕೃಷ್ಣಾಶ್ರಮದ ಮೂಲಕ ಅವರ ಸೇವೆ ಆರಂಭವಾಯಿತು.
ಕೇಶವರಾಯರು ಬಂಗಾಳದ ನೂರಾರು ನೆರೆಪೀಡಿತ ಹಳ್ಳಿಗಳಲ್ಲಿ ಓಡಾಡಿದರು. ಕೆಲವೆಡೆ ಅಂತೂ ತುಂಬು ಪ್ರವಾಹದಲ್ಲಿ ಈಜಿ ಹೋಗುತ್ತಿದ್ದುದೂ ಉಂಟು. ಹಗಲಿರುಳೆನ್ನದೆ ಕೆಸರು ತುಂಬಿದ ದಾರಿಗಳಲ್ಲಿ ಓಡಾಟ. ಮುಳುಗುತ್ತಿದ್ದ ನೂರಾರು ಬಂಧುಗಳನ್ನು ಸಾವಿನ ದವಡೆಯಿಂದ ತಪ್ಪಿಸಿ ಎಳೆದು ತಂದರು. ದಿನವೆಲ್ಲ ಅಂತಹವರ ಸೇವೆಯಲ್ಲಿಯೇ ಕಳೆಯುತ್ತಿತ್ತು. ಒಂದೆರಡು ಘಂಟೆ ನಿದ್ದೆ. ತುತ್ತು ಕೂಳು. ಮತ್ತೆ ಓಡಾಟ.
ಕಟ್ಟು ಮಸ್ತಾದ ಶರೀರ ಅವರದು. ದಣಿವರಿಯದೆ, ಸೋಲೊಪ್ಪದ ಅವರು ಸಾವು ಬದುಕಿನ ಹೋರಾಟದಲ್ಲಿದ್ದ ಸಾವಿರಾರು ಹಳ್ಳಿಗರ ಸೇವೆಗೈದರು. ಬಂಗಾಳಿ ಅವರಿಗೆ ತಾಯಿನುಡಿಯಷ್ಟು ಸಲೀಸು. ಹಾಗಾಗಿ ಅವರಿಗೆ ಎಲ್ಲರ ಹತ್ತಿರವೂ ಹೋಗಲು ಸಾಧ್ಯವಾಯಿತು. ಸೇವೆಯ ವೇಳೆ ಅವರ ಬಳಿ ಅಹಂಕಾರ ಎಂದೂ ಸುಳಿಯಲಿಲ್ಲ. ಅವರ ಪಾಲಿಗೆ ಅದೊಂದು ಪರೋಪಕಾರದ ಕೆಲಸವೂ ಎನಿಸಲಿಲ್ಲ. ಸೇವೆಯನ್ನು ತಮ್ಮ ಸಹಜ ಕರ್ತವ್ಯವೆಂದೇ ಬಗೆದವರು ಅವರು. "ಇವರೆಲ್ಲ ಬೇರೆಯವರೇನು? ನಮ್ಮ ಬಂಧು ಬಾಂಧವರೇ" ಎನ್ನುತ್ತಿದ್ದರು.
ಕೇಶವರಾಯರೊಂದಿಗೆ ಕೆಲಸ ಮಾಡುವುದೇ ಜೊತೆಗಾರರಿಗೆಲ್ಲ ಒಂದು ಆನಂದ. ಅವರ ಏಕಾಗ್ರತೆ, ಕಾರ್ಯ ತತ್ಪರತೆ ನೋಡಿ ಮಿತ್ರರಲ್ಲಿ ಬೆರೆಗಾದರು. ತಮ್ಮ ನಾಯಕನ ಬಗ್ಗೆ ಅವರಿಗೆಲ್ಲ ತುಂಬ ಅಭಿಮಾನ. ಕೇಶವರಾಯರ ಮಾತು ಅವರಿಗೆಲ್ಲಾ ಮೀರಲಾಗದ ಆಣತಿ.
No comments:
Post a Comment