Showing posts with label Gandhiji. Show all posts
Showing posts with label Gandhiji. Show all posts

Sunday, November 25, 2012

೯೯. ಪರಿಪೂರ್ಣ ಸ್ವಯಂಸೇವಕ

ಪರಿಪೂರ್ಣ ಸ್ವಯಂಸೇವಕ

   ಡಾಕ್ಟರ್‌ಜಿಯವರು ಗಾಂಧೀಜಿಯವರನ್ನು ಭೇಟಿ ಮಾಡಿದರು. ವರ್ಧಾ ಶಿಬಿರಕ್ಕೆ ಗಾಂಧೀಜಿಯವರು ಬಂದಿದ್ದರು. ಡಾಕ್ಟರ್‌ಜಿಯವರು ಶಿಬಿರಕ್ಕೆ ಬರುವ ಹಿಂದಿನ ದಿನವೇ ಗಾಂಧೀಜಿಯವರು ಶಿಬಿರವನ್ನು ನೋಡಿಕೊಂಡು ಬಂದಿದ್ದರು. ಸ್ಥಾಪಕ ಯಾರೆಂದು ಅವರಿಗೆ ಗೊತ್ತಾಯಿತು. ಡಾ|| ಹೆಡಗೆವಾರರ ಹೆಸರನ್ನು ಕೇಳಿದ್ದರು, ಮೊದಲೂ ಭೇಟಿ ಮಾಡಿದ್ದರು. ೧೯೨೦ರ ಕಾಂಗ್ರೆಸ್ ಅಧಿವೇಶನದಲ್ಲೇ ಡಾಕ್ಟರ್‌ಜಿಯವರನ್ನು ಗಾಂಧೀಜಿಯವರು ನೋಡಿದ್ದರು. ಡಾ|| ಹೆಡಗೆವಾರರೆನ್ನುವವರು ಸಂಘವನ್ನು ಸ್ಥಾಪನೆ ಮಾಡಿದ್ದಾರೆ, ಅವರನ್ನು ನಾನು ಭೇಟಿ ಮಾಡಬೇಕು ಎನ್ನುವ ಕಾರಣಕ್ಕಾಗಿ ಗಾಂಧೀಜಿಯವರು, ಡಾಕ್ಟರ್‌ಜಿಯವರು ಮರುದಿನ ಬಂದ ನಂತರ ಮತ್ತೆ ಶಿಬಿರಕ್ಕೆ ಹೋದರು. ಅವರ ಜೊತೆ ಇನ್ನೂ ಇಬ್ಬರಿದ್ದರು.

    ಮಾತುಕತೆಯಲ್ಲಿ ಗಾಂಧೀಜಿಯವರು ಡಾಕ್ಟರ್‌ಜಿಯವರನ್ನು ಕೇಳಿದರು ’ಈ ಸ್ವಯಂಸೇವಕ ಎನ್ನುವ ಕಲ್ಪನೆ ಏನು?’ ಎಂದು. ಆಗ ಡಾಕ್ಟರ್‌ಜಿಯವರು ಹೇಳಿದ ಒಂದು ವಾಕ್ಯ ಇದೆ. ’ದೇಶದ ಸರ್ವಾಂಗೀಣ ಉನ್ನತಿಗಾಗಿ ತನ್ನ ಸರ್ವಸ್ವವನ್ನೂ ಸಮರ್ಪಣೆಯನ್ನು ಮಾಡುವುದಕ್ಕೆ ಸಿದ್ಧನಾಗಿರುವಂತಹ ಕಾರ್ಯಕರ್ತನನ್ನು ನಾವು ಸ್ವಯಂಸೇವಕನೆಂದು ಕರೆಯುತ್ತೇವೆ’ ಎಂದು ಡಾಕ್ಟರ್‌ಜಿಯವರು ಹೇಳಿದರು.

Labels: Doctorji, Gandhiji, Perfect Swayamsevak, Sangha Story, ಗಾಂಧೀಜಿ, ಡಾಕ್ಟರ್‌ಜಿ, ಪರಿಪೂರ್ಣ ಸ್ವಯಂಸೇವಕ, ಸಂಘದ ಕಥೆ

Thursday, November 22, 2012

೭೨. ಇದ್ದಲಿನ ಅಂಗಡಿ ತೆರೆಯೋಣ

ಇದ್ದಲಿನ ಅಂಗಡಿ ತೆರೆಯೋಣ

   ೧೯೪೮ರ ಗಾಂಧೀಜಿ ಹತ್ಯೆಯ ನಂತರ ಸಂಘದ ಮೇಲೆ ನಿರ್ಬಂಧ ಹಾಕಲಾಯಿತು. ದೇಶಾದಾದ್ಯಂತ ಸ್ವಯಂಸೇವಕರ ಮೇಲೆ ಹಲ್ಲೆ ನಡೆಯಿತು. ಸ್ವಯಂಸೇವಕರ ಆಸ್ತಿಪಾಸ್ತಿಯನ್ನು ನಷ್ಟಗೊಳಿಸಲಾಯಿತು. ಅನೇಕರು ವಿಧವಿಧವಾದ ಕಷ್ಟಕ್ಕೊಳಪಟ್ಟರು.

    ಆ ಸಮಯದಲ್ಲಿ ಕೊಲ್ಹಾಪುರದ ಸಂಘಚಾಲಕರಾಗಿದ್ದವರು ಮಾ. ಪೆಂಡಾರ್ಕರ್‌ಜಿ. ಒಂದು ಸಿನಿಮಾ ಸ್ಟುಡಿಯೋದ ಮಾಲಿಕರು. ಡಾಕ್ಟರ್‌ಜಿಯವರ ಏಕೈಕ ಚಲನಚಿತ್ರವನ್ನು ಚಿತ್ರೀಕರಿಸಿದವರು ಅವರೇ.

    ಗಾಂಧೀಜಿ ಹತ್ಯೆಯ ಕೋಪಕ್ಕೆ ಪೆಂಡಾರ್ಕರ್‌ರವರ ಸ್ಟುಡಿಯೋ ಬಲಿಯಾಯಿತು. ಸುದ್ದಿ ತಿಳಿದು ಪೆಂಡಾರ್ಕರ್ ಮತ್ತು ಅವರ ಹೆಂಡತಿ ಸ್ಟುಡಿಯೋಗೆ ಬಂದು ನೋಡಿದರೆ ದುರುಳರು ಅದಕ್ಕೆ ಬೆಂಕಿ ಹಚ್ಚಿ ಬೂದಿಗೊಳಿಸಿದ್ದರು. ಆ ದೃಶ್ಯವನ್ನು ನೋಡಿದ ಪೆಂಡಾರ್ಕರ್‌ರವರ ಹೆಂಡತಿ ಅಳತೊಡಗಿದರು. ಆದರೆ ಪೆಂಡಾರ್ಕರ್‌ರವರು ಮಾತ್ರ ಸುಮ್ಮನೆ ಉರಿಯುತ್ತಿದ್ದ ಸ್ಟುಡಿಯೋ ಕಡೆ ನೋಡುತ್ತಾ ನಿಂತಿದ್ದರು.

    ಅವರ ಹೆಂಡತಿಯು "ನಿಮಗೇನೂ ಅನ್ನಿಸುತ್ತಲೇ ಇಲ್ಲವೇನು? ನಮ್ಮ ಸ್ಟುಡಿಯೋವನ್ನು ಸುಟ್ಟು ಹಾಕಿದ್ದರೂ ನಿಮಗೆ ದುಃಖ, ಕೋಪ ಬರುತ್ತಿಲ್ಲವೇ?" ಎಂದು ಕೇಳಿದರು.

    ಪೆಂಡಾರ್ಕರ್‌ರವರು ಶಾಂತವಾಗಿ "ಹೋಗಲಿ ಬಿಡು, ಸ್ಟುಡಿಯೋ ಸುಟ್ಟು ಆರಿದ ನಂತರ ಇದ್ದಲಿನ ಅಂಗಡಿಯನ್ನು ತೆರೆದರಾಯಿತು" ಎಂದರು.

Labels: Gandhiji, Pendarkar, Sacrifice, Sangha Story, Studio burns, ಗಾಂಧೀಜಿ ಹತ್ಯೆ, ಪೆಂಡಾರ್ಕರ್, ಸಮರ್ಪಣೆ, ಸ್ಟುಡಿಯೋಗೆ ಬೆಂಕಿ