Showing posts with label ಶಾಖೆ. Show all posts
Showing posts with label ಶಾಖೆ. Show all posts

Sunday, November 25, 2012

೧೦೩. ಬಂದೂಕಿನ ಗುಂಡಿಗೆ ಉತ್ತರ

ಬಂದೂಕಿನ ಗುಂಡಿಗೆ ಉತ್ತರ

   ಮೊಗ ಎನ್ನುವುದೊಂದು ಪಂಜಾಬಿನ ಜಿಲ್ಲಾ ಕೇಂದ್ರ. ಖಾಲಿಸ್ಥಾನದ ಬೇಡಿಕೆಯನ್ನಿಟ್ಟುಕೊಂಡು ಭಯೋತ್ಪಾದಕತೆ ಮುಗಿಲು ಮುಟ್ಟಿದಂತಹ ದಿನಗಳು. ಆಗ, ಮೋಗದ ಒಂದು ಶಾಖೆಯ ಮೇಲೆ ಖಾಲಿಸ್ಥಾನೀ ಭಯೋತ್ಪಾದಕರು ಬಂದೂಕಿನಿಂದ ದಾಳಿ ಮಾಡಿದರು. ಸುಮಾರು ೧೦-೧೨ ಸ್ವಯಂಸೇವಕರು ಸಂಘಸ್ಥಾನದಲ್ಲೇ ಉರುಳಿಬಿದ್ದರು. ಇನ್ನೊಂದಷ್ಟು ಜನ ಗಾಯಗೊಂಡರು. ಈ ರೀತಿ ಸಾವಿಗೀಡಾದವರನ್ನು ಮರಣೋತ್ತರ ಪರೀಕ್ಷೆಗೆ, ಗಾಯಗೊಂಡವರ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕೆಲಸವು ತಕ್ಷಣ ನಡೆಯಿತು. ಇಡೀ ನಗರದ ಸ್ವಯಂಸೇವಕರು, ಜನರೂ, ಪೊಲೀಸರು ಬಂದು ವ್ಯವಸ್ಥೆಗಳನ್ನು ಮಾಡಿದರು.

    ಮರುದಿನ ಅದೇ ಸಮಯಕ್ಕೆ ಅದೇ ಸಂಘಸ್ಥಾನದಲ್ಲಿ ಸುಮಾರು ೨೦೦ ಸ್ವಯಂಸೇವಕರು ಒಂದು ಗಂಟೆ ಶಾಖೆ ನಡೆಸಿದರು. ಅವರೇನು ಬಂದೂಕು ತರಲಿಲ್ಲ. ಪೊಲೀಸರ ಬಳಿ ತಮ್ಮ ರಕ್ಷಣೆಗಾಗಿ ಕೇಳಲಿಲ್ಲ. ಸ್ವಯಂಸೇವಕರು ಮೌನವಾಗಿ ಬಂದರು, ಧ್ವಜ ಹಾಕಿದರು, ಅಲ್ಲಿ ಶಾಖೆ ನಡೆಸಿದರು, ಪ್ರಾರ್ಥನೆ ಮಾಡಿ ’ಭಾರತಮಾತಾ ಕಿ ಜಯ್’ ಎಂದು ಮುಗಿಸಿ ಹೋದರು. ಸಮಾಜ ಇದನ್ನು ನೋಡಿತು. ಭಯೋತ್ಪಾದಕರೂ ಇದನ್ನು ಬಹುಶಃ ನೋಡಿರಬೇಕು. ಸಂಘದ ಸ್ವಯಂಸೇವಕರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಲಿಲ್ಲ. ಅವರು ಮೌನವಾಗಿ ಒಂದು ಉತ್ತರ ಕೊಟ್ಟರು ’ನಿಮ್ಮ ಬಂದೂಕಿನಿಂದ ನೀವು ನಮ್ಮ ಸಂಘದ ಶಾಖೆಯನ್ನು ಸಮಾಪ್ತ ಮಾಡಲಾರಿರಿ. ನಾವು ನಿಮ್ಮ ಭಯೋತ್ಪಾದಕತೆಗೆ ಹೆದರಿ ಬಾಲ ಮುದುರಿಕೊಂಡು ಹೋಗುವಂತಹ ಹಿಂದು ವೀರರಲ್ಲ. ನಾವು ನಿಮ್ಮ ಎದುರು ನಿಲ್ಲಬಲ್ಲೆವು. ನಿಮ್ಮ ಬಂದೂಕಿಗೆ ಉತ್ತರ ಕೊಡಬಲ್ಲೆವು’ ಎಂದು. ಅಲ್ಲಿ ಇನ್ನೊಮ್ಮೆ ದಾಳಿಯಾಗಲಿಲ್ಲ.

Labels: Moga, Punjab, Sacrifice, Shakha, Terrorist Attack, ಪಂಜಾಬ್, ಬಲಿ, ಭಯೋತ್ಪಾದಕರ ಗುಂಡು, ಮೊಗ, ಶಾಖೆ

Tuesday, November 20, 2012

೬೩. ಸಂಘಕ್ಕೇಕೆ ತರುಣರು ಬರುತ್ತಾರೆ

ಸಂಘಕ್ಕೇಕೆ ತರುಣರು ಬರುತ್ತಾರೆ

   ಒಮ್ಮೆ ಗದಗದ ತೋಂಟಾರಾಧ್ಯರನ್ನು ನೋಡಲು ಅವರ ಮಠಕ್ಕೆ ಮಂಗೇಶ ಭೇಂಡೆಜಿ ಹೋಗಿದ್ದರು. ಅದೇ ಸಮಯದಲ್ಲಿ ಸ್ವಾಮೀಜಿಯವರನ್ನು ನೋಡಲು ಇನ್ನಿತರ ಇಬ್ಬರು ಬಂದಿದ್ದರು. ಎಲ್ಲರ ಪರಿಚಯದ ಆಯಿತು. ಅವರಲ್ಲಿ ಒಬ್ಬರು ಮಠದ ಶಾಲೆಯಲ್ಲಿ ನಡೆಸುವ ಸ್ಕೌಟ್ಸ್ ತಂಡಕ್ಕೆ ತರುಣರು ಏಕ ಬರುತ್ತಿಲ್ಲ ಎಂದು ಸಂಶೋಧನೆ ಮಾಡಲು ಬಂದಿದ್ದರು. ಇನ್ನೊಬ್ಬರು ಕೂಡ ಅವರದೇ ಶಾಲೆಯ ಮೇಲ್ವಿಚಾರಕರು.

    ಸ್ವಾಮೀಜಿ ಕೇಳಿದರು "ತರುಣರು ಸ್ಕೌಟ್ಸ್‍ಗೆ ಬರುತ್ತಿಲ್ಲ ಎಂದು ಹೇಳುತ್ತಿರುವಿರಿ. ಅವರಿಗೆ ಇಂಥ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲ ಎಂದು ಬೇರೆ ಹೇಳುತ್ತಿದ್ದೀರಿ. ಆದರೆ ಅದೇ ತರುಣರು ಆರ್.ಎಸ್.ಎಸ್. ನಡೆಸುವ ಶಾಖೆಗಳಿಗೆ ಹೋಗುತ್ತಿರುವವರಲ್ಲ?"

    "ಅವರ ಶಾಖೆಗೆ ಕೇವಲ ಉಚ್ಛ ಜಾತಿಯವರು ಮಾತ್ರ ಹೋಗುತ್ತಾರೆ" ಎಂದು ಶಾಲಾ ಮೇಲ್ವಿಚಾರಕರು ಹೇಳಿದರು.

    ತಟ್ಟನೆ ಸ್ವಾಮೀಜಿಯವರು "ಹಾಗಿಲ್ರಿ, ಅವರ ರಾಜ್ಯಾಧ್ಯಕ್ಷ ಬೇರೆ ಜಾತಿಯವರಿದ್ದಾರಲ್ಲ?"

    ಆಗ ಬಂದಿದ್ದ ಅವರಿಬ್ಬರೂ ಏನೂ ಹೇಳಲಾಗದೆ ಹೋದರು.

Labels: Sangha Story, Scouts, Shakha, Youth, ತರುಣರು, ಶಾಖೆ, ಸಂಘದ ಕಥೆ, ಸ್ಕೌಟ್ಸ್