Showing posts with label ತರುಣರು. Show all posts
Showing posts with label ತರುಣರು. Show all posts

Tuesday, November 20, 2012

೬೩. ಸಂಘಕ್ಕೇಕೆ ತರುಣರು ಬರುತ್ತಾರೆ

ಸಂಘಕ್ಕೇಕೆ ತರುಣರು ಬರುತ್ತಾರೆ

   ಒಮ್ಮೆ ಗದಗದ ತೋಂಟಾರಾಧ್ಯರನ್ನು ನೋಡಲು ಅವರ ಮಠಕ್ಕೆ ಮಂಗೇಶ ಭೇಂಡೆಜಿ ಹೋಗಿದ್ದರು. ಅದೇ ಸಮಯದಲ್ಲಿ ಸ್ವಾಮೀಜಿಯವರನ್ನು ನೋಡಲು ಇನ್ನಿತರ ಇಬ್ಬರು ಬಂದಿದ್ದರು. ಎಲ್ಲರ ಪರಿಚಯದ ಆಯಿತು. ಅವರಲ್ಲಿ ಒಬ್ಬರು ಮಠದ ಶಾಲೆಯಲ್ಲಿ ನಡೆಸುವ ಸ್ಕೌಟ್ಸ್ ತಂಡಕ್ಕೆ ತರುಣರು ಏಕ ಬರುತ್ತಿಲ್ಲ ಎಂದು ಸಂಶೋಧನೆ ಮಾಡಲು ಬಂದಿದ್ದರು. ಇನ್ನೊಬ್ಬರು ಕೂಡ ಅವರದೇ ಶಾಲೆಯ ಮೇಲ್ವಿಚಾರಕರು.

    ಸ್ವಾಮೀಜಿ ಕೇಳಿದರು "ತರುಣರು ಸ್ಕೌಟ್ಸ್‍ಗೆ ಬರುತ್ತಿಲ್ಲ ಎಂದು ಹೇಳುತ್ತಿರುವಿರಿ. ಅವರಿಗೆ ಇಂಥ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲ ಎಂದು ಬೇರೆ ಹೇಳುತ್ತಿದ್ದೀರಿ. ಆದರೆ ಅದೇ ತರುಣರು ಆರ್.ಎಸ್.ಎಸ್. ನಡೆಸುವ ಶಾಖೆಗಳಿಗೆ ಹೋಗುತ್ತಿರುವವರಲ್ಲ?"

    "ಅವರ ಶಾಖೆಗೆ ಕೇವಲ ಉಚ್ಛ ಜಾತಿಯವರು ಮಾತ್ರ ಹೋಗುತ್ತಾರೆ" ಎಂದು ಶಾಲಾ ಮೇಲ್ವಿಚಾರಕರು ಹೇಳಿದರು.

    ತಟ್ಟನೆ ಸ್ವಾಮೀಜಿಯವರು "ಹಾಗಿಲ್ರಿ, ಅವರ ರಾಜ್ಯಾಧ್ಯಕ್ಷ ಬೇರೆ ಜಾತಿಯವರಿದ್ದಾರಲ್ಲ?"

    ಆಗ ಬಂದಿದ್ದ ಅವರಿಬ್ಬರೂ ಏನೂ ಹೇಳಲಾಗದೆ ಹೋದರು.

Labels: Sangha Story, Scouts, Shakha, Youth, ತರುಣರು, ಶಾಖೆ, ಸಂಘದ ಕಥೆ, ಸ್ಕೌಟ್ಸ್