Showing posts with label Conversion. Show all posts
Showing posts with label Conversion. Show all posts

Saturday, November 24, 2012

೯೫. ಸಕಾರಾತ್ಮಕ ಚಿಂತನೆ

ಸಕಾರಾತ್ಮಕ ಚಿಂತನೆ

   ೨೦೧೨ರಲ್ಲಿ ಹುಬ್ಬಳ್ಳಿಯಲ್ಲಿ ಹಿಂದೂ ಶಕ್ತಿ ಸಂಗಮ ನಡೆಯಿತು. ಅದಾದ ೧೫ ದಿನಗಳ ನಂತರ ಹುಬ್ಬಳ್ಳಿಯಿಂದ ಆ ಕಾರ್ಯಕ್ರಮಕ್ಕೆ ಹೋದವರ ಒಂದು ಬೈಠಕ್ ನಡೆಯಿತು. ವಿಶ್ವ ಹಿಂದೂ ಪರಿಷತ್ತಿನ ಅಲ್ಲಿನ ಪ್ರಾಂತ ಕಾರ್ಯದರ್ಶಿಗಳು ಒಂದು ಅನುಭವವನ್ನು ಹೇಳಿದರು. ರಾಯಚೂರು ಜಿಲ್ಲೆಯಲ್ಲಿ ಕರಡಿಗುಡ್ಡ ಎನ್ನುವ ಒಂದು ಹಳ್ಳಿಯಿದೆ. ಅಲ್ಲಿಯ ೩೨ ಹರಿಜನ ಕುಟುಂಬದವರು ತಾವು ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗುತ್ತೇವೆ ಎಂದು ಹೇಳಿದ್ದರು. ಯಾವುದೋ ಒಂದು ನಿಶ್ಚಿತ ದಿನ ಮತಾಂತರದ ಕಾರ್ಯಕ್ರಮವಿತ್ತು. ಚರ್ಚಿನವರು ಬಹಳ ಉತ್ಸುಕತೆಯಿಂದ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದರು.

    ಸುದ್ದಿ ತಿಳಿದ ತಕ್ಷಣ ವಿಶ್ವ ಹಿಂದೂ ಪರಿಷತ್ತಿನವರು ಹೋಗಿ ಮಾತನಾಡಿದರು. ಆದರೆ ಹರಿಜನರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ’ಇಲ್ಲಿನ ದೇವಸ್ಥಾನದವರು ನಮ್ಮನ್ನು ಒಳಗೆ ಬಿಡುವುದಿಲ್ಲ. ಹಾಗಾಗಿ ನಾವೇಕೆ ನಿಮ್ಮ ಧರ್ಮದಲ್ಲಿರಬೇಕು?’ ಎಂದು ಪ್ರಶ್ನಿಸಿದರು. ಆಗ ಪರಿಷತ್ತಿನವರು ದೇವಸ್ಥಾನದ ಸಮಿತಿಯವರ ಬಳಿ ಮಾತನಾಡಿದರು. ಆದರೆ ಸಮಿತಿಯವರು ಹರಿಜನರನ್ನು ದೇವಸ್ಥಾನದಲ್ಲಿ ಬಿಡಲು ಒಪ್ಪಲಿಲ್ಲ. ೩-೪ ಬಾರಿ ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಅವರ ಮನಸನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ.

    ಆಷ್ಟರಲ್ಲಿ ಹುಬ್ಬಳ್ಳಿಯ ಶಕ್ತಿ ಸಂಘಮ ಕಾರ್ಯಕ್ರಮ ಪ್ರಾರಂಭವಾಗಿತ್ತು. ಆ ದೇವಸ್ಥಾನದ ಸಮಿತಿಯ ೩ ಮೂರು ಜನರು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಶಿಬಿರದಲ್ಲಿ ಇತರ ೨೯,೭೩೯ ಜನರ ಜೊತೆ ೩ ದಿನವಿದ್ದರು. ಕಾರ್ಯಕ್ರಮದ ನಂತರ ಜನವರಿ ೨೯ರಂದು ರಾತ್ರಿ ಮೂರು ಗಂಟೆಗೆ ಊರು ತಲುಪಿದರು. ಮರುದಿನ ಬೆಳಿಗ್ಗೆ ೭ ಗಂಟೆಗೆ ಆ ಹರಿಜನ ಕೇರಿಗೆ ಹೋಗಿ ಅಲ್ಲಿನ ಜನರನ್ನು ಮಾತನಾಡಿಸಿ ಎಲ್ಲರನ್ನು ದೇವಸ್ಥಾನಕ್ಕೆ ಆಹ್ವಾನಿಸಿದರು. ಮತಾಂತರವಾಗದಂತೆ ಮನವೊಲಿಸಿದರು. ಮೊದಲು ಒಪ್ಪಿರದಿದ್ದ ಆ ದೇವಸ್ಥಾನದ ಸಮಿತಿಯವರು ಸಂಘದ ಶಿಬಿರಕ್ಕೆ ಬಂದ ನಂತರ ಬದಲಾಗಿದ್ದರು. ತಮ್ಮೂರಿನವರು ಮತಾಂತರವಾಗಬಾರದು. ದಲಿತರು ನಮ್ಮೊಡನೆಯೇ ಇರಬೇಕು ಎನ್ನುವ ಮನಸ್ಸು ಮಾಡಿದ್ದರು.

Labels: Conversion, Hubballi, Sangha Story, Transformation, ಚಿಂತನೆ, ಬದಲಾವಣೆ, ಮತಾಂತರ, ವಾತಾವರಣ, ಸಂಘದ ಕಥೆ, ಹುಬ್ಬಳ್ಳಿ

Wednesday, November 21, 2012

೬೮. ಧರ್ಮವು ಪ್ರಾಣಕ್ಕಿಂತ ಮಿಗಿಲು

ಧರ್ಮವು ಪ್ರಾಣಕ್ಕಿಂತ ಮಿಗಿಲು

   ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ರಾಜರು, ಸಾಮಂತರು, ಸಂಸ್ಥಾನಗಳು ಪಾಲ್ಗೊಂಡಿದ್ದವು. ವೀರ ಸೈನಿಕರು, ಸೇನಾಪತಿಗಳು, ರಾಜ ಮಹಾರಾಜರು ಬ್ರಿಟಿಷರ ವಿರುದ್ಧ ಹೋರಾಡಿದರು. ದುರದೃಷ್ಟವಶಾತ್ ಕೆಲವೇ ಕೆಲವರ ಮೋಸದಿಂದಾಗಿ, ಭಾರತದಿಂದ ಸೈನ್ಯ ಸೋತು ಬ್ರಿಟಿಷರನ್ನು ಓಡಸಬಹುದಾಗಿದ್ದ ಅವಕಾಶ ತಪ್ಪಿಹೋಯಿತು.

    ಯುದ್ಧ ಮುಗಿದ ನಂತರ ಬ್ರಿಟಿಷರು ತಮ್ಮ ಸೈನ್ಯದ ವಿರುದ್ಧ ಯುದ್ಧದಲ್ಲಿ ಭಾಗವಹಿಸಿದ ಎಲ್ಲರನ್ನೂ ಹಿಡಿದು ಸೆರೆಮನೆಯಲ್ಲಿ ಹಾಕಿಯೋ ಅಥವಾ ಮರಣದಂಡನೆ ನೀಡಿಯೋ ತಮ್ಮ ಸೇಡನ್ನು ತೀರಿಸಿಕೊಳ್ಳತೊಡಗಿದರು. ಮುಂದೆಂದೂ ಬ್ರಿಟಿಷರ ವಿರುದ್ಧ ಆ ರೀತಿಯ ಸಂಗ್ರಾಮ ನಡೆಯಬಾರದೆಂಬ ಉದ್ದೇಶದಿಂದ ತಮ್ಮ ವಿರೋಧಿಗಳೆಲ್ಲರನ್ನೂ ಸದೆ ಬಡಿಯಲು ಆರಂಭಿಸಿದರು.

    ಹಾಗೆ ಸೆರೆಸಿಕ್ಕವರಲ್ಲಿ ಒಂದು ಚಿಕ್ಕ ಸಂಸ್ಥಾನದ ಒಬ್ಬ ಸೈನಿಕ. ಇನ್ನೂ ೧೭-೧೮ರ ವಯಸ್ಸು. ಸೆರೆಯಾದರೂ ಯಾವುದೇ ಭಯವಿಲ್ಲದೇ ಧೈರ್ಯದಿಂದಲೇ ಇದ್ದ. ಬ್ರಿಟಿಷ ಅಧಿಕಾರಿಯೊಬ್ಬ ಸೋಗಿನ ವಿಚಾರಣೆ ನಡೆಸಿ ಅವನಿಗೆ ಮರಣದಂಡನೆ ಶಿಕ್ಷೆ ವಿಧಿಸಿದ. ಮರಣ ದಂಡನೆಯ ದಿನ ಅವನನ್ನು ಒಂದು ಮೈದಾನಕ್ಕೆ ಕರೆದುಕೊಂಡು ಬರಲಾಯಿತು.

    ಬೇಡಿಯ ಸಹಿತ ಬಂದ ಅವನನ್ನು ಕುರಿತು ಬ್ರಿಟಿಷ್ ಅಧಿಕಾರಿಯು ಹೇಳಿದ "ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಡಿದ ನಿನಗೆ ಮರಣ ದಂಡನೆ ವಿಧಿಸಲಾಗಿದೆ. ನಿನಗೋ ಇನ್ನೂ ಎಳೆ ವಯಸ್ಸು. ಆದ್ದರಿಂದ ನಿನಗೆ ಬದುಕಲು ಒಂದು ಅವಕಾಶ ಕೊಡುತ್ತೇನೆ. ನೀನು ನಿನ್ನ ಹಿಂದು ಧರ್ಮವನ್ನು ಬಿಟ್ಟು ಕ್ರಿಶ್ಚಿಯನ್ ಆಗಿ ಮತಾಂತರಗೊಂಡರೆ, ನಿನಗೆ ಪ್ರಾಣ ಭಿಕ್ಷೆ ಕೊಟ್ಟು ನಿನ್ನನ್ನು ಬ್ರಿಟಿಷ್ ಸೈನ್ಯದಲ್ಲೂ ಸೇರಿಸಿಕೊಳ್ಳುತ್ತೇವೆ. ಇಲ್ಲವಾದರೆ ನಿನಗೆ ಇಂದೇ ತೋಪಿಗೆ ಕಟ್ಟಿ ಉಡಾಯಿಸಲಾಗುವುದು".

    ಅವನ ಮಾತನ್ನು ಕೇಳಿ ಆ ಹುಡುಗ ನಕ್ಕು "ನನಗೆ ನನ್ನ ಜೀವಕ್ಕಿಂತ ನನ್ನ ರಾಷ್ಟ್ರ ಮತ್ತು ನನ್ನ ಹಿಂದು ಧರ್ಮವೇ ಮೇಲು. ನಿಮ್ಮ ಪಾಡಿಗೆ ನಿಮ್ಮ ತೋಪಿಗೆ ಕೆಲಸ ಕೊಡಿ" ಎಂದ.

    ಅವನ ಮಾತಿನ್ನು ಕೇಳಿ ಆ ಬ್ರಿಟಿಷ್ ಅಧಿಕಾರಿಯು ತನ್ನ ಆಮಿಷವು ಕೆಲಸ ಮಾಡದೆಂದು ತಿಳಿದು ಅವನನ್ನು ತೋಪಿಗೆ ಕಟ್ಟಲು ಹೇಳಿದ. ಆ ಹುಡುಗನು ನಗುನಗುತ್ತಲೇ ತನ್ನ ಪ್ರಾಣವನ್ನು ಅರ್ಪಿಸಿದ.

Labels: 1857 1st War of Independence, Boudhik Story, Conversion, Sacrifice, ಪ್ರಾಣಾರ್ಪಣೆ, ಮತಾಂತರ, ಯೋಧ, ಹಿಂದು ಧರ್ಮ, ೧೮೫೭ರ ಸಂಗ್ರಾಮ