Showing posts with label ಹೂ.ವೆ. ಶೇಷಾದ್ರಿ. Show all posts
Showing posts with label ಹೂ.ವೆ. ಶೇಷಾದ್ರಿ. Show all posts

Saturday, November 24, 2012

೯೩. ಖಾರದ ಊಟ

ಖಾರದ ಊಟ

   ಹಿಂದೆ ಸರಕಾರ್ಯವಾಹರಾಗಿದ್ದಂತಹ ಹೂ.ವೆ. ಶೇಷಾದ್ರಿಯವರು ತೀರಿಕೊಂಡ ನಂತರ ಅವರ ಬಗ್ಗೆ ಒಂದು ಸಣ್ಣ ಪುಸ್ತಕ ಬಿಡುಗಡೆಯಾಯಿತು. ಅದರಲ್ಲಿ ಅವರ ಬಗ್ಗೆ ನ. ಕೃಷ್ಣಪ್ಪನವರು ಬರೆದಿದ್ದಾರೆ.

    ಆಗ ೫೦ರ ದಶಕ. ಆಗ ಪ್ರಾಂತ ಪ್ರಚಾರಕರಾಗಿದ್ದ ಶೇಷಾದ್ರಿಯವರಿಗೆ ಅಲ್ಸರ್ ಖಾಯಿಲೆ ಇತ್ತು. ಆಗ ಮನೆಗಳಲ್ಲಿ ಉಳಿದುಕೊಳ್ಳುವ ಅವಕಾಶವು ಕಡಿಮೆ. ಒಂದು ಮನೆಯಲ್ಲಿ ಊಟದ ವ್ಯವಸ್ಥೆಯಾಗಿತ್ತು. ಊಟಕ್ಕೆ ವಿಪರೀತ ಖಾರ ಹಾಕಿದ್ದರು. ಆದರೂ ಶೇಷಾದ್ರಿಯವರು ಆ ಊಟವನ್ನೇ ತಿಂದರು.

    ನಂತರ ಅವರಿಗೆ ಭೇದಿ ಶುರುವಾಯಿತು. ಇವರಿಬ್ಬರೂ ಉಳಿದುಕೊಂಡಿದ್ದು ಮಹಡಿಯ ಮೇಲೆ. ಪ್ರತಿ ಇಪ್ಪತ್ತು ನಿಮಿಷಕ್ಕೊಮ್ಮೆ ಕೆಳಗಿಳಿದು ಬರಬೇಕು. ೨-೩ ಮೂರು ಬಾರಿ ಭೇದಿಯಾದ ಮೇಲೆ ಶೇಷಾದ್ರಿಯವರು ಕೃಷ್ಣಪ್ಪನವರ ಬಳಿ ’ಈ ಮನೆಯವರಿಗೆ ತೊಂದರೆ ಕೊಡುವುದು ಬೇಡ. ಊರ ಹೊರಗಿರುವ ಕೆರೆಯ ಪಕ್ಕದಲ್ಲೇ ಮಲಗೋಣ’ ಎಂದು ಹೇಳಿ, ಮನೆಯವರಿಗೆ ಗೊತ್ತಾಗದ ಹಾಗೆ ಹೊರಗೆ ಬಂದರು. ಬೆಳಿಗ್ಗೆ ಹೊತ್ತಿಗೆ ೧೫-೨೦ ಬಾರಿ ಭೇದಿಯಾಗಿದೆ. ಕೆರೆಯಲ್ಲೇ ಸ್ನಾನ ಮಾಡಿ ಮನೆಗೆ ಬಂದರು. ಮನೆಯವರಿಗೆ ಯಾವ ವಿಷಯವನ್ನೂ ಹೇಳಲಿಲ್ಲ. ಎಲ್ಲಾ ವ್ಯವಸ್ಥೆಗಳನ್ನೂ ಹೊಗಳಿ ಹೊರಟರು. ಅಂಥಾ ತೀವ್ರವಾದ ಅನಾರೋಗ್ಯವಿದ್ದಾಗಲೂ, ಖಾರದ ಊಟ ಮಾಡಿ ಆರೋಗ್ಯ ಹಾಳಾದರೂ ಯಾವುದೇ ಮಾತಾಡದೆ ಸಹಿಸಿಕೊಂಡರು.

Labels: H.S. Sheshadri, Loose Motion, Na. Krishnappa, Sangha Story, Ulcer, ಅಲ್ಸರ್, ನ. ಕೃಷ್ಣಪ್ಪ, ಭೇದಿ, ಸಂಘದ ಕಥೆ, ಹೂ.ವೆ. ಶೇಷಾದ್ರಿ