Showing posts with label ಭಗವಧ್ವಜ. Show all posts
Showing posts with label ಭಗವಧ್ವಜ. Show all posts

Thursday, November 22, 2012

೮೦. ಭಗವೆಗೆ ಒಂದು ಇಂಚೂ ಕೊಡುವುದಿಲ್ಲ

ಭಗವೆಗೆ ಒಂದು ಇಂಚೂ ಕೊಡುವುದಿಲ್ಲ

   ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ ನೆಹರೂ ಒಮ್ಮೆ ವಿಶ್ರಾಂತಿಗೆಂದು ಕಾಶ್ಮೀರಕ್ಕೆ ಹೋಗಿದ್ದರು. ಡಿಸೆಂಬರ್ ತಿಂಗಳಿನ ಒಂದು ಬೆಳಿಗ್ಗೆ. ಹೊರಗೆ ಓಡಾಡುತ್ತಿದ್ದಾಗ ಒಂದು ಭಗವಾಧ್ವಜ ಕಾಣಿಸಿತು.

    ಅದನ್ನು ನೋಡಿ ಹತ್ತಿರ ಹೋಗಿ ವಿಚಾರಿಸಿದಾಗ ಅಲ್ಲಿ ಸಂಘದ ಶಾಖೆ ನಡೆಯುತ್ತಿದೆ ಎಂದು ತಿಳಿಯಿತು.

    ಆಗ ಕೆಂಡಮಂಡಲವಾದ ನೆಹರು ಕೋಪದಿಂದ "ಈ ಧ್ವಜಕ್ಕೆ ನಾನು ಒಂದು ಇಂಚೂ ಜಾಗ ಕೊಡುವುದಿಲ್ಲ. ಹಾಗೆ ಮಾಡಲು ನಾನು ಎಲ್ಲ ಶಕ್ತಿಯನ್ನೂ ಹಾಕುತ್ತೇನೆ. ಅದೂ ಸಾಲದಿದ್ದರೆ ಪ್ರಪಂಚದ ಶಕ್ತಿಯನ್ನು ತಂದು ಅದನ್ನು ನಾಶ ಮಾಡುತ್ತೇನೆ" ಎಂದು ಕೂಗಾಡಿದರು.

    ಆದೇ ನೆಹರು ಮುಂದೆ ೧೯೬೨ರ ಚೀನಾ ಯುದ್ಧದ ಸಮಯದಲ್ಲಿ ಸಂಘದ ನೆರವನ್ನು ಪಡೆಯಬೇಕಾದ ಪರಿಸ್ಥಿತಿ ಬಂದಿತು. ಸ್ವಯಂಸೇವಕರು ಆ ಯುದ್ಧದಲ್ಲಿ ಮಾಡಿದ ದೇಶಸೇವೆಯನ್ನು ಗುರುತಿಸಿ ನೆಹರೂ ೧೯೬೩ ಜನವರಿ ೨೩ರ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಸಂಘದ ಸ್ವಯಂಸೇವಕರನ್ನು ಆಹ್ವಾನಿಸಿದರು.

Labels: Kashmir, Nehru, No Place for Bhagva, Sangha Story, ಒಂದು ಇಂಚೂ ಕೊಡುವುದಿಲ್ಲ, ಕಾಶ್ಮೀರ, ನೆಹರು, ಭಗವಧ್ವಜ, ಸಂಘದ ಕಥೆ