Showing posts with label Swami Vivekananda. Show all posts
Showing posts with label Swami Vivekananda. Show all posts

Thursday, November 22, 2012

೭೮. ಏಕಾಗ್ರತೆಯ ಅಭ್ಯಾಸ

ಏಕಾಗ್ರತೆಯ ಅಭ್ಯಾಸ

   ಅಮೇರಿಕಾದ ಕೀಲ್‍ನಗರ. ಸ್ವಾಮಿ ವಿವೇಕಾನಂದರು ಅಲ್ಲಿನ ಪ್ರಾಧ್ಯಾಪಕ ಡೈಸನ್ ಜತೆ ಮಾತನಾಡುತ್ತಿದ್ದ ಸಂದರ್ಭ. ಸ್ವಾಮೀಜಿ ಕಾವ್ಯವನ್ನು ಓದುತ್ತಿದ್ದರು. ಆಗ ನಡುವೆ ಡೈಸನ್ ಕೇಳಿದ ಪ್ರಶ್ನೆಯೊಂದಕ್ಕೆ ಸ್ವಾಮೀಜಿ ಉತ್ತರಿಸಲಿಲ್ಲ. ಆದ್ದರಿಂದ ಆ ಪ್ರಾಧ್ಯಾಪಕ ಸಿಟ್ಟಾದ. ಅದನ್ನರಿತ ಸ್ವಾಮೀಜಿ, ’ಕ್ಷಮಿಸಿ, ಕಾವ್ಯ ಓದುವುದರಲ್ಲಿ ಮಗ್ನನಾಗಿದ್ದೆ. ನಿಮ್ಮ ಪ್ರಶ್ನೆಯನ್ನು ಗ್ರಹಿಸಲಾಗಲಿಲ್ಲ’ ಎಂದರು.

    ಡೈಸನ್‍ಗೆ ಉತ್ತರದಿಂದ ತೃಪ್ತಿಯಾಗಲಿಲ್ಲ. ಅದನ್ನು ಗಮನಿಸಿದ ಸ್ವಾಮೀಜಿ ತಾವು ಓದಿದ ಕಾವ್ಯಭಾಗವನ್ನು ಹಾಗೆಯೇ ಹೇಳಿದರು. ಆ ಕಾವ್ಯಭಾಗ ಅವರಿಗೆ ಕಂಠಪಾಠವಾಗಿದ್ದನ್ನು ಡೈಸನ್ ಗಮನಿಸಿದ. "ಪರಕೀಯ ಭಾಷೆಯ ಕಾವ್ಯವು ಒಂದೇ ಓದಿನಲ್ಲಿ ಕಂಠಪಾಠವಾಗುವುದು ಹೇಗೆ ಸಾಧ್ಯ?" ಎಂಬುದು ಆ ಪ್ರಾಧ್ಯಾಪಕನ ಪ್ರಶ್ನೆ. ಅತನಿಗಿದು ಅಚ್ಚರಿ!

    "ಇದರಲ್ಲಿ ಅಚ್ಚರಿಯೇನು ಬಂತು? ಏಕಾಗ್ರತೆಯಿಂದ ಓದಿದ್ದನ್ನು ನೆನಪಿಟ್ಟುಕೊಳ್ಳುವುದು ಸುಲಭ. ಯೋಗಸಾಧನೆ ಏಕಾಗ್ರತೆಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆಮೇಲೆ ಒಂದೇ ಕ್ಷಣದಲ್ಲಿ ಒಂದು ಶಬ್ದವನ್ನು ಓದತೊಡಗುತ್ತದೆ. ನೀವು ಒಂದು ಕ್ಷಣದಲ್ಲಿ ಒಂದು ಸಾಲನ್ನೇ ಓದಬಲ್ಲಿರಿ. ಏಕಾಗ್ರತೆಯ ಅಭ್ಯಾಸದಿಂದ ನಾನು ಒಂದೇ ನೋಟದಲ್ಲಿ ಇಡೀ ಒಂದು ಪುಟವನ್ನೇ ಓದಬಲ್ಲೆ. ಅಧ್ಯಯನದ ವೇಳೆ ನಾನು ಮೈಮರೆಯುತ್ತೇನೆ. ಮೈಮೇಲೆ ಬೆಂಕಿಕಿಡಿಯಿಟ್ಟರೂ ಆಗ ನನಗೆ ತಿಳಿಯುವುದಿಲ್ಲ". ಸ್ವಾಮೀಜಿಯವರ ಮಾತು ಮಾರ್ಮಿಕವಾಗಿತ್ತು.

Labels: Concentration, Dyson, Swami Vivekananda, ಏಕಾಗ್ರತೆ, ಡೈಸನ್, ಬೋಧ ಕಥೆ, ಸ್ವಾಮಿ ವಿವೇಕಾನಂದ

Monday, November 19, 2012

೫೭. ಮೂರ್ತಿ ಪೂಜೆ

ಮೂರ್ತಿ ಪೂಜೆ

    ರಾಜಸ್ಥಾನದ ರಾಜ ಜಯಸಿಂಹ ದೇವರನ್ನು ನಂಬದ ಒಬ್ಬ ನಾಸ್ತಿಕ. ಭೋಗ ವಿಲಾಸದ ಜೀವನದಲ್ಲೇ ನಂಬಿಕೆಯಿಟ್ಟಿದವನು. ಒಮ್ಮೆ ಸ್ವಾಮಿ ವಿವೇಕಾನಂದರು ಅವನ ಅರಮನೆಗೆ ಅತಿಥಿಯಾಗಿ ಹೋಗುತ್ತಾರೆ. ಮಾತು ಚರ್ಚೆಗೆ ತಿರುಗಿ, ಮೂರ್ತಿ ಪೂಜೆಯ ವಿಷಯಕ್ಕೆ ಬರುತ್ತದೆ. ಇಬ್ಬರೂ ತಮ್ಮ ತಮ್ಮ ವಿಚಾರವನ್ನು ಹೇಳುತ್ತಾ ಸಾಗುತ್ತಾರೆ.

    ಕೊನೆಗೆ ಸ್ವಾಮಿ ವಿವೇಕಾನಂದರು ರಾಜನ ತಂದೆಯ ಭಾವಚಿತ್ರವನ್ನು ತೋರಿಸಿ ಅದಕ್ಕೆ ಉಗುಳಲು ಹೇಳುತ್ತಾರೆ. ಸ್ವಾಮಿ ವಿವೇಕಾನಂದರಿಂದ ಈ ರೀತಿಯಾದ ಮಾತು ಕೇಳಿ ರಾಜ ಆಶ್ಚರ್ಯ ಪಡುತ್ತಾನೆ. ಆಗ ಸ್ವಾಮಿ ವಿವೇಕನಂದರೇ ವಿವರಿಸುತ್ತಾ "ಈ ಭಾವಚಿತ್ರವು ಕಾಗದದ ಮೇಲೆ ಬಿಡಿಸಿರುವಂತಹುದು. ಅದು ನಿಮ್ಮ ತಂದೆಯ ಭಾವಚಿತ್ರ. ನಿಮ್ಮ ತಂದೆ ಸ್ವರ್ಗಸ್ಥರಾದ ನಂತರವೂ ನೀವು ಅವರ ಭಾವಚಿತ್ರವಕ್ಕೆ ಅವರ ಜೀವಿತ ಅವಧಿಯಲ್ಲಿ ಅವರಿಗೆ ಕೊಟ್ಟಷ್ಟೇ ಗೌರವವನ್ನು ಕೊಡುತ್ತಿದ್ದೀರಿ. ಅದನ್ನು ಕಾಗದ ಎಂದು ಭಾವಿಸದೆ ಅದರಲ್ಲಿ ನಿಮ್ಮ ತಂದೆಯವರನ್ನೇ ಕಾಣುತ್ತಿದ್ದೀರಿ. ಅದೇ ರೀತಿ ನಾವು ಕಲ್ಲನ್ನು ಪೂಜಿಸುವುದಿಲ್ಲ; ಬದಲಾಗಿ ಕಲ್ಲಲ್ಲಿರುವ ದೇವರನ್ನು ಪೂಜಿಸುತ್ತೇವೆ" ಎಂದರು. ತನ್ನ ತಪ್ಪಿನ ಅರಿವಾಗಿ ರಾಜ ಬದಲಾಗಿ ತನ್ನ ನಾಸ್ತಿಕತೆಯನ್ನು ಬಿಡುತ್ತಾನೆ.

Labels: Athiest Raja Jayasimha, Boudhik Story, Swami Vivekananda, ನಾಸ್ತಿಕತೆ, ಬೌದ್ಧಿಕ ಕಥೆ, ರಾಜ ಜಯಸಿಂಹ, ಸ್ವಾಮಿ ವಿವೇಕಾನಂದ